ಕರಡಿ ಸೆರೆ ಹಿಡಿದ ಅಧಿಕಾರಿಗಳು

230

Get real time updates directly on you device, subscribe now.


ಕುಣಿಗಲ್: ರೈತರ ಜಮೀನಿನಲ್ಲಿ ಕಾಣಿಸಿಕೊಂಡ ಕರಡಿಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜನಿ ದಾಖಲೆ ಕಾಡಬೋರನಹಳ್ಳಿ ಗ್ರಾಮದ ರಾಜಣ್ಣ ಜಮೀನಿನಲ್ಲಿ ಗುರುವಾರ ಬೆಳಗ್ಗೆ ತಂತಿಗೆ ಕರಡಿ ಸಿಲುಕಿದೆ ಎಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದ್ದರು.
ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಮಹಮದ್ ಮನ್ಸೂರ್, ತುಮಕೂರು ಎಸಿಎ್ ಅನುಪಮಾ ಮತ್ತು ಸಿಬ್ಬಂದಿ ಹಾಗೂ ಪಶು ವೈದ್ಯಾಧಿಕಾರಿಗಳು ಬನ್ನೇರುಘಟ್ಟ ವನ್ಯಜೀವಿ ವಿಭಾಗದ ಉಮಾಶಂಕರ್ ಕಾರ್ಯಾಚರಣೆ ನಡೆಸಿ ತಂತಿಗೆ ಸಿಲುಕಿದ್ದ 3 ವರ್ಷದ ಗಂಡು ಕರಡಿ ಸಂರಕ್ಷಿಸಿ ಆರೋಗ್ಯ ತಪಾಸಣೆ ಮಾಡಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!