ತುಮಕೂರು: ತಾಲ್ಲೂಕಿನ ಓಬಳಾಪುರದ ಬಳಿ ಶುಕ್ರವಾರ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ತಿಪಟೂರಿನ ಹೊಳವನಹಳ್ಳಿ ಗ್ರಾಮದ ಸಂಜಯ್ (21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಜಯ್ ಮತ್ತು ಯೋಗೀಶ್ ಇಬ್ಬರು ನಗರದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.
ಬೆಳಿಗ್ಗೆ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಯೋಗೀಶ್ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಕ್ ನಲ್ಲಿ ತೆರಳುವಾಗ ವಾಹನ ಡಿಕ್ಕಿ
Get real time updates directly on you device, subscribe now.
Prev Post
Comments are closed.