25 ಕುರಿಗಳು ಮೃತ: ಕುರಿಗಾಹಿಗಳ ನೆರವಿಗೆ ಶಾಸಕ ಅಭಯ

106

Get real time updates directly on you device, subscribe now.


ಶಿರಾ: ಮೈಸೂರು ಜಿಲ್ಲೆ ಎಚ್ಡಿ ಕೋಟೆ ತಾಲ್ಲೂಕಿನ ಹೊಮ್ಮರಗಹಳ್ಳಿಗೆ ಹೊಲಸೆ ಹೋಗಿದ್ದ, ಹೂಲಿಕುಂಟೆ ಹೋಬಳಿ ದೊಡ್ಡಬಾಣಗೆರೆ ಗ್ರಾಮದ ಕುರಿಗಾಹಿ ಗೀತಮ್ಮ ಅವರ 25 ಕ್ಕೂ ಅಧಿಕ ಕುರಿಗಳು ವಿಷಕಾರೀ ಸೊಪ್ಪು ತಿಂದು ಅಸುನೀಗಿದ್ದ ವಿಷಯ ತಿಳಿದು ಕೂಡಲೇ ಎಚ್ಡಿ ಕೋಟೆಯ ಶಾಸಕ ಅನಿಲ್ ಅವರ ಜೊತೆ ಮಾತನಾಡಿ ಪಶುವೈದ್ಯೆರನ್ನು ಹಾಗೂ ಪೋಲಿಸ್ ಸಿಬ್ಬಂದಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲು ಮನವಿ ಮಾಡಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಶಾಸಕ ಡಾ. ಸಿ .ಎಂ. ರಾಜೇಶ್ ಗೌಡ ಅವರು ಜೀವನೋಪಾಯಕ್ಕಾಗಿ ಕಾಡುಗೊಲ್ಲ ಸಮುದಾಯದ ನೂರಾರು ಜನ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ನೂರಾರು ಕುರಿಗಳ ಜೊತೆ ಹೊಲಸೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಹಲವು ರೀತಿಯ ಅಹಿತಕರ ಘಟನೆಗಳು ನಡೆಯುತ್ತವೆ ಎಂದರು. ಕುರಿಗಾಹಿಗಳಿಗೆ ನನ್ನ ಶಕ್ತಿ ಮೀರಿ ಸಹಾಯ ನೀಡಲು ಪ್ರಯತ್ನಿಸುತ್ತೇನೆ. ಸರಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!