ವೈಸಿಎಸ್ ಸ್ಪರ್ಧೆಗೆ ಒತ್ತಡ, ಕಿಡ್ನಿ ಮಾರಿ ಹಣ..

169

Get real time updates directly on you device, subscribe now.


ಚಿಕ್ಕನಾಯಕನಹಳ್ಳಿ: ಮುಂಬರಲಿರುವ ವಿಧಾನಸಭಾ ಚುನಾವಣಾ ವೆಚ್ಚಕ್ಕಾಗಿ ಮಾಜಿ ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯನವರಿಗೆ ತನ್ನ ಕಿಡ್ನಿಯನ್ನು ಮಾರಿ ಹಣ ಒದಗಿಸುತ್ತೇನೆಂಬ ಭಾವನಾತ್ಮಕ ಸಂದೇಶವನ್ನು ಅಭಿಮಾನಿ ಕೆಂಕೆರೆ ಪ್ರಭು ಕುಮಾರ್ ವ್ಯಕ್ತಪಡಿಸಿದ್ದಾರೆ.

ಹಣವಿಲ್ಲದೆ ಚುನಾವಣೆ ಮಾಡುವುದೇ ಅಸಾಧ್ಯವೆಂಬ ವಾತಾವರಣ ದೇಶ ಹಾಗೂ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಕಂಡಿಲ್ಲ. ಕ್ಷೇತ್ರದ ಅಭಿವೃದ್ದಿಗೆ ಕಾಂಗ್ರೆಸ್ ಅನಿವಾರ್ಯವಾಗಿದ್ದು ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ತನ್ನ ಕಿಡ್ನಿಯನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಸಿದ್ದರಾಮಯ್ಯನವರ ಚುನಾವಣಾ ವೆಚ್ಚಕ್ಕೆ ದೇಣಿಗೆ ನೀಡುತ್ತೇವೆ. ಜೊತೆಗೆ ತಮ್ಮ ಅಭಿಮಾನಿಗಳು ಹಾಗು ಕಾರ್ಯಕರ್ತರೊಂದಿಗೆ ಸೇರಿ ಸಿದ್ದರಾಮಯ್ಯನವರ ಗೆಲುವಿಗೆ ಪ್ರಯತ್ನ ನಡೆಸುತ್ತೇವೆ ಸ್ಪರ್ಧೆ ಮಾಡಿ ಎಂದು ತನ್ನ ನೆಚ್ಚಿನ ನಾಯಕರಿಗೆ ವಿನಂತಿಸುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ.

Get real time updates directly on you device, subscribe now.

Comments are closed.

error: Content is protected !!