ತಾಯಿ, ಮಗ ನೇಣಿಗೆ ಶರಣು

172

Get real time updates directly on you device, subscribe now.


ತಿಪಟೂರು: ನಗರದ ಹಾಸನ ವೃತ್ತದ ಬಳಿಯ ಶಾರದನಗರದ ಮನೆಯಲ್ಲಿ ತಾಯಿ, ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಎರಡು ದಿನಗಳಿಂದ ಮನೆಯಿಂದ ಹೊರ ಬಾರದ ಕಾರಣ ಪಕ್ಕದ ಮನೆಯವರ ಮಾಹಿತಿ ಮೇರೆಗೆ ಶುಕ್ರವಾರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸೌರಭ ಅಶೋಕ್ (34) ಹಾಗೂ ಪುತ್ರ ತನ್ವಿತ್ ಆರ್ಯ (6) ಮೃತರು. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ವೈ.ಮೂಳೇನಹಳ್ಳಿ ಗ್ರಾಮದವರು. ಸೌರಭ ಪತಿ ಅಶೋಕ್ ಡಿಸೆಂಬರ್ ತಿಂಗಳಲ್ಲಿ ಮೃತಪಟ್ಟಿದ್ದು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!