ಪೇ ಎಂಎಲ್ಎ ಅಭಿಯಾನ- ಬಿಜೆಪಿ ಕಿಡಿ

112

Get real time updates directly on you device, subscribe now.


ತುಮಕೂರು: ನಗರ ಶಾಸಕರ ವಿರುದ್ಧ ಪೇ ಎಂಎಲ್ಎ ಎಂದು ಕಿಡಿಗೇಡಿಗಳು ರಾತ್ರೋ ರಾತ್ರಿ ಕಳ್ಳರಂತೆ ಬಾಡಿಗೆ ವ್ಯಕ್ತಿಗಳನ್ನು ಕರೆತಂದು ಭಿತ್ತಿ ಪತ್ರ ಅಂಟಿಸಿ ತುಮಕೂರು ಜಿಲ್ಲೆಯ ರಾಜಕಾರಣವನ್ನು ಕಲುಷಿತಗೊಳಿಸಲು ಹರ ಸಾಹಸ ಪಡುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಈ ಕೃತ್ಯ ವನ್ನು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಖಂಡಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಹೇಡಿ ಕೃತ್ಯ ಮಾಡುವವರ ವಿರುದ್ಧ ತುಮಕೂರು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದೆ.

ತುಮಕೂರು ನಗರದಲ್ಲಿ ಇಂದೆಂದೂ ಕಾಣದಂತಹ ಅಭಿವೃದ್ಧಿ ಕಾರ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದಾಗಿದ್ದು, ಶಾಸಕರು ಸಹ ಡಬಲ್ ಇಂಜಿನ್ ಸರ್ಕಾರದ ಅನುದಾನ ತಂದು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು ಇದು ಕೆಲವು ಚಿಲ್ಲರೆ ಗಂಜಿ ಗಿರಾಕಿಗಳಿಗೆ ನಿದ್ದೆಗೆಡೆಸಿದೆ. ಈ ರೀತಿಯಾಗಿ ಕರಪತ್ರಗಳನ್ನು ಹತಾಶರಾಗಿ ಮಧ್ಯ ರಾತ್ರಿ ಕಳ್ಳರಂತೆ ತುಮಕೂರಿನ ವಿವಿಧ ಕಡೆ ಅಂಟಿಸಿಕೊಂಡು ಬಂದಿದ್ದಾರೆ.

ತುಮಕೂರು ನಗರದ ಜನತೆಯು ಅತ್ಯಂತ ಪ್ರಬುದ್ದರಾಗಿದ್ದು, ಕಳೆದ 5 ವರ್ಷಗಳಲ್ಲಿ ತುಮಕೂರು ನಗರದಲ್ಲಾಗಿರುವ ಅಮೂಲಗ್ರವಾದ ಬದಲಾವಣೆಯನ್ನು ಅತ್ಯಂತ ಸೂಕ್ಷವಾಗಿ ಗಮನಿಸುತ್ತಿದ್ದಾರೆ. ಶಾಸಕರ ಅಭಿವೃದ್ಧಿ ಕಾರ್ಯದ ಬಗ್ಗೆ ಜನರಿಗೆ ಹೆಮ್ಮೆಯಿದೆ. ಹಾಗಾಗಿ ಬೆಳಗಿನ ಜಾವ ಈ ಕೃತ್ಯ ಕಂಡಂತಹ ಅನೇಕ ನಾಗರಿಕರು ಸ್ವಯಂ ಪ್ರೇರಿತರಾಗಿ ಭಿತ್ತಿಪತ್ರಗಳನ್ನು ತೆರವುಗೊಳಿಸಿದ್ದಾರೆ.

ಶಾಸಕರು ಜನರ ಮಧ್ಯೆ ಇದ್ದು, ತುಮಕೂರು ನಗರದ ಚಿತ್ರಣವನ್ನೆ ಬದಲಿಸಿದ್ದು ಇಂತಹ ಹೀನ ಕೃತ್ಯಗಳಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತದೆಯೇ ಹೊರತು ಎಂದಿಗೂ ಕುಂದುವುದಿಲ್ಲ. ಶಾಸಕರ ಯಶಸ್ಸು ಸಹಿಸದ ರಾಜಕೀಯ ವೈರಿಗಳು ಹೊಟ್ಟೆ ಪಾಡಿಗಾಗಿ ರಾಜಕಾರಣ ಮಾಡುತ್ತಿರುವ ಗಂಜಿ ಗಿರಾಕಿಗಳ ಮುಖಾಂತರ ಈ ರೀತಿಯ ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವುದನ್ನು ತುಮಕೂರು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಖಂಡಿಸುತ್ತದೆ. ಇಂತಹ ನೂರಾರು ಕೀಡಿಗೇಡಿಗಳು ಎಷ್ಟೇ ಕೆಸರು ಎರಚಿದರು ಆ ಕೆಸರಿನಲ್ಲಿಯೇ ಕಮಲ ಅರಳುವುದು. ಮತ್ತೆ ತುಮಕೂರಿನಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ವೈ.ಯಶಸ್ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!