ಅಪಘಾತದಲ್ಲಿ ಚಾಲಕ ಸಾವು

155

Get real time updates directly on you device, subscribe now.


ಕುಣಿಗಲ್: ಕ್ಯಾಂಟರ್ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಕ್ಯಾಂಟರ್ ವಾಹನ ಚಾಲಕ ಸ್ಥಳದಲ್ಲೆ ಮೃತಪಟ್ಟಿರುವ ಧಾರುಣ ಘಟನೆ ರಾಜ್ಯಹೆದ್ದಾರಿ 33ರ ಬಾಗೇನಹಳ್ಳಿ ಗೇಟ್ ಬಳಿ ನಡೆದಿದೆ.
ಮೃತನನ್ನು ಚನ್ನರಾಯಪಟ್ಟಣ ತಾಲ್ಲೂಕಿನ ಅರಿಯೂರು ವಾಸಿ ರಾಜೇಶ್(30) ಎಂದು ಗುರುತಿಸಲಾಗಿದೆ.

ಈತ ಚನ್ನರಾಯಪಟ್ಟಣದಿಂದ ತುಮಕೂರು ಕಡೆಗೆ ಚೇರ್ ತುಂಬಿದ್ದ ಕ್ಯಾಂಟರ್ ವಾಹನದಲ್ಲಿ ತೆರಳುತ್ತಿದ್ದು ಸೋಮವಾರ ರಾತ್ರಿ ಬಾಗೇನಹಳ್ಳಿ ಗೇಟ್ ಬಳಿ ನಿಯಂತ್ರಣ ತಪ್ಪಿ ಎದುರಿಗೆ ಬಂದ ಮತ್ತೊಂದು ಕ್ಯಾಂಟರ್ ಗೆ ಗುದ್ದಿದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಮತ್ತೊಂದು ಕ್ಯಾಂಟರ್ ಚಾಲಕ ಇಮ್ರಾನ್ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!