ಅಧಿಕಾರಿಗಳ ನಡೆಗೆ ಮಹಿಳೆಯರ ಅಸಮಾಧಾನ

ಮನೆ ನಿರ್ಮಾಣಕ್ಕೆ ಮರಳು ಶೇಖರಣೆ- ಪ್ರಕರಣ ದಾಖಲಿಸಿ ಅಧಿಕಾರಿಗಳು

123

Get real time updates directly on you device, subscribe now.


ಮಧುಗಿರಿ: ಸ್ವಂತ ಮನೆ ನಿರ್ಮಾಣಕ್ಕೆ ಎಂದು ಶೇಖರಣೆ ಮಾಡಿಟ್ಟಿದ್ದ ಮರಳಿನ ಗುಡ್ಡೆ ಕಂಡು ಅಧಿಕಾರಿಗಳು ಇದನ್ನು ಮಾರಾಟ ಮಾಡುವುದಕ್ಕೆ ಶೇಖರಿಸಿಕೊಂಡಿದ್ದಾರೆ ಎಂದು ಅನುಮಾನಗೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಕಸಬಾ ವ್ಯಾಪ್ತಿಯ ಮಲ್ಲೆನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಈ ಬಗ್ಗೆ ಕುಟುಂಬದ ಗೃಹಿಣಿಯರು ಅಳಲು ತೋಡೆದುಕೊಂಡಿರುವ ಘಟನೆ ಗ್ರಾಮದಲ್ಲಿ ನಡೆದಿದೆ.

ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಐದು ಮಂದಿ ಅಣ್ಣ ತಮ್ಮಂದಿರ ಪೈಕಿ ಈಗಾಗಲೇ ಇಬ್ಬರು ಮನೆ ನಿರ್ಮಿಸಿಕೊಂಡಿದ್ದು ಇನ್ನು ಮೂವರು ಮನೆ ನಿರ್ಮಾಣ ಮಾಡಲು ಪಾಯ ತೆಗೆದಿದ್ದು ಗೋಡೆ ನಿರ್ಮಿಸ ಬೇಕಾಗಿರುವುದರಿಂದ ಜಮೀನಿನಲ್ಲಿ ಮರಳು ಶೇಖರಣೆ ಮಾಡಿದ್ದಾರೆ ಹೊರತು ಮಾರಾಟಕ್ಕಲ್ಲ ಎಂದು ಹೇಳಿದ್ದಾರೆ.

ಮಲ್ಲೇನಹಳ್ಳಿ ಗ್ರಾಮದಲ್ಲಿರುವ 3 ಗುಂಟೆ ಜಮೀನಿನಲ್ಲಿ ಶ್ರೀನಿವಾಸ್, ಗೋವಿಂದಪ್ಪ, ವೆಂಕಟಸ್ವಾಮಿ, ವೆಂಕಟೇಶ್, ರಮೇಶ್ ಎಂಬ ಅಣ್ಣ ತಮ್ಮಂದಿರು ವಿಭಾಗದ ಮೂಲಕ ಮನೆ ನಿರ್ಮಿಸಿಕೊಳ್ಳಲು ಪಾಯ ಹಂತದವರೆಗೂ ಕಟ್ಟಿದ್ದಾರೆ.
ವೆಂಕಟಸ್ವಾಮಿ ಮತ್ತು ವೆಂಕಟೇಶ್ ಎಂಬವರು ಈಗಾಗಲೇ ಮನೆ ನಿರ್ಮಿಸಿಕೊಂಡಿದ್ದು ಶ್ರೀನಿವಾಸ್ ಗೋವಿಂದಪ್ಪ ಮತ್ತು ರಮೇಶ್ ಅವರು ಮನೆ ನಿರ್ಮಿಸಿಕೊಳ್ಳಬೇಕಾಗಿದೆ.

ಇವರು ಗ್ರಾಮ ಪಂಚಾಯಿತಿ ವತಿಯಿಂದ ಮನೆ ನಿರ್ಮಾಣಕ್ಕಾಗಿ ವಸತಿ ಯೋಜನೆ ಹಣ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಯುಗಾದಿ ಹಬ್ಬದ ನಂತರ ಮನೆ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಿದ್ದು ಇದರ ಸಲುವಾಗಿ ಮನೆಯ ನಿರ್ಮಾಣದ ಪ್ರಯುಕ್ತ ಮರಳು ಶೇಖರಣೆ ಮಾಡಿ ಇಟ್ಟಿದ್ದಾರೆ. ಕೆಲವರು ಇದನ್ನು ತಪ್ಪು ಗ್ರಹಿಸಿಕೊಂಡು ಮಾರಾಟ ಮಾಡಲು ಶೇಖರಿಸಿದ್ದಾರೆ ಎಂದು ತಹಶೀಲ್ದಾರ್ ಮತ್ತು ಪೊಲೀಸ್ ಇಲಾಖೆ ಮತ್ತು ಗಣಿ ಭೂ ವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಇಲಾಖೆಯವರು ಭೇಟಿ ನೀಡಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿರುವುದು ಸರಿಯೇ ಎಂಬುದು ಗೃಹಣಿಯರ ಆರೋಪವಾಗಿದೆ.

ಈ ಮರಳನ್ನು ನಾವು ಕಳೆದ 20 ದಿನಗಳ ಹಿಂದೆ ಶೇಖರಣೆ ಮಾಡಲಾಗಿದೆ. ಮಾರಾಟ ಮಾಡುವುದಾದರೆ ಅಂದಿನ ರಾತ್ರಿಯೇ ಲಾರಿಗೆ ತುಂಬಿ ಕಳುಹಿಸುತಿದ್ದೆವು. ನಾವು ಮನೆ ನಿರ್ಮಾಣಕ್ಕಾಗಿ ಪ್ರಾಮಾಣಿಕವಾಗಿ ಶೇಖರಣೆ ಮಾಡಿದ್ದೇವೆ ಹೊರಟು ಯಾವುದೇ ಮಾರಾಟಕ್ಕಲ್ಲ ಎಂದು ಸಮಸ್ಯೆ ವಿವರಿಸಿದರು.

Get real time updates directly on you device, subscribe now.

Comments are closed.

error: Content is protected !!