ವಾಗ್ದಾನದಂತೆ ರಸ್ತೆ ಕಾಮಗಾರಿ: ರಾಜೇಶ್ ಗೌಡ

86

Get real time updates directly on you device, subscribe now.


ಶಿರಾ: ಚಂಗಾವರ ರಸ್ತೆಯಲ್ಲಿರುವ ಗಜಮಾರನ ಹಳ್ಳಿಯಿಂದ ಕಗ್ಗಲಡು ಗ್ರಾಮದ ವರೆಗೆ ರಸ್ತೆಗಳು ಹದಗೆಟ್ಟಿದ್ದು ಸಂಚಾರಕ್ಕೆ ತುಂಬಾ ತೊಂದರೆಯಾಗಿ ಅಪಘಾತ ಸಂಭವಿಸುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಉಪ ಚುನಾವಣೆ ವೇಳೆ ಕೇಳಿ ಬಂದ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿಕೊಂಡಾಗ ಅವರು ತಮ್ಮ ಅನುದಾನದಡಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಆರು ಕಿಲೋ ಮೀಟರ್ ಉದ್ದದ ರಸ್ತೆ ಕಾಮಗಾರಿಗೆ ಅನುಮೋದನೆ ನೀಡಿರುತ್ತಾರೆ. ಚುನಾವಣೆಯಲ್ಲಿ ಸಮಯದಲ್ಲಿ ನಾನು ನೀಡಿದ ವಾಗ್ದಾನ ಈಡೇರಿಸಿದ್ದೇನೆ ಎಂದು ಶಾಸಕ ಸಿ.ಎಂ.ರಾಜೇಶ್ ಗೌಡ ತಿಳಿಸಿದರು.

ಗುರುವಾರ ತಾಲ್ಲೂಕಿನ ಕಗ್ಗಲಡು ಗ್ರಾಮದಲ್ಲಿ 6 ಕಿ.ಮೀ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕಗ್ಗಲಡು ಗ್ರಾಮದಲ್ಲಿ ಸುಮಾರು 200 ಮೀಟರ್ ವರೆಗೆ ಸಿಸಿ ರಸ್ತೆ ಹಾಗೂ 600 ಮೀಟರ್ ವರೆಗೆ ಚರಂಡಿ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.
ಶಿರಾ ಯೋಜನ ಪ್ರಾಧಿಕಾರದ ಅಧ್ಯಕ್ಷ ಮಾರುತೀಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣಪ್ಪ, ಮದಲೂರು ನರಸಿಂಹಮೂರ್ತಿ, ಪಡಿ ರಮೇಶ್, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ರವಿಕುಮಾರ್, ಪ್ರಭಾರ ಉಪ ತಹಶೀಲ್ದಾರ್ ಸುದರ್ಶನ್, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಮಂಜುಳ ಭೂತಯ್ಯ, ಹೇಮರಾಜು, ಶಿಕ್ಷಕಿ ನಾಗವೇಣಿ, ಗ್ರಾಮದ ಮುಖಂಡರಾದ ಶಶಿಕಾಂತ್, ಜಯಣ್ಣ, ತಿಪ್ಪೇಸ್ವಾಮಿ, ಉಮೇಶ್, ನಾಗರಾಜು, ಶ್ರೀನಿವಾಸ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!