ತುರುವೇಕೆರೆ: ಪಟ್ಟಣದಲ್ಲಿ 14ರ ಮಂಗಳವಾರ 11 ಗಂಟೆಗೆ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಾಲ್ಗೊಳ್ಳಲಿದ್ದಾರೆ ಎಂದು ಅಲ್ಪಸಂಖ್ಯಾತರ ಘಟಕದ ಜಪ್ರುಲ್ಲಾಖಾನ್ ತಿಳಿಸಿದರು.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಈ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಗೆಲುವಿಗೆ ಮುಸ್ಲಿಂ ಬಂಧುಗಳು ಕಾರಣರಾಗಿದ್ದರು. ಆದರೇ ಕಳೆದ ಚುನಾವಣೆಯಲ್ಲಿ ತಪ್ಪು ಗ್ರಹಿಕೆಯಿಂದ ಕಾಂಗ್ರೇಸ್ ಪಕ್ಷಕ್ಕೆ ಮತಹಾಕಿದ್ದರು. ಇದೀಗ ಮುಸ್ಲಮಾನ ಬಂಧುಗಳು ಎಂ.ಟಿ.ಕೃಷ್ಣಪ್ಪನವರನ್ನು ಶಾಸಕರನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದಾರೆ. ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಅಲ್ಪಸಂಖ್ಯಾತರ ಸಮಾವೇಶದಲ್ಲಿ ರಾಜ್ಯ ಅಲ್ಪಸಂಖ್ಯಾತರ ಘಟಕದ ನಜ್ಮಾ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸ್ಭೆರಿದಂತೆ ರಾಜ್ಯ ಹಾಗು ಜಿಲ್ಲಾ ಮಟ್ಟದ ಪದಾದಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಹೆಚ್ಚಿ ಸಂಖ್ಯೆಯ ಮುಸ್ಲಮಾನ ಬಂಧುಗಳು ಆಗಮಿಸಿ ಸಮಾವೇಶವನ್ನು ಯಶಶ್ವಿಗೊಳಿಸುವಂತೆ ಕೋರಿದ್ದಾರೆ.
ತುರುವೇಕೆರೆಗೆ ಸಿ.ಎಂ.ಇಬ್ರಾಹಿಂ ಆಗಮನ
Get real time updates directly on you device, subscribe now.
Prev Post
Next Post
Comments are closed.