ಸ್ವಾಭಿಮಾನ ಕಳೆದುಕೊಂಡು ಮತ್ತೆ ಜೆಡಿಎಸ್ ಗೆ ಹೋಗಲ್ಲ

103

Get real time updates directly on you device, subscribe now.


ಗುಬ್ಬಿ: ನನ್ನ ಸ್ವಾಭಿಮಾನ ಕಳೆದುಕೊಂಡು ನಾನು ಯಾವುದೇ ಕಾರಣಕ್ಕೂ ಮತ್ತೆ ಜೆಡಿಎಸ್ನತ್ತಾ ಹೋಗುವುದಿಲ್ಲ. ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಗುಬ್ಬಿ ತಾಲೂಕಿನ ಕಡಬ, ಆಡುಗೊಂಡನಹಳ್ಳಿ, ದೊಣ್ಣೆರೆ, ಕಡಬ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಅವರು ಪಕ್ಷಕ್ಕೆ ಬನ್ನಿ ಎಂದು ಆಹ್ವಾನವಿತ್ತ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ನಾನು ಶಾಸಕನಾಗಿರುವಾಗಲೇ ಇನ್ನೊಬ್ಬ ವ್ಯಕ್ತಿಯನ್ನು ತಂದು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವಾಗ ನಾನು ಅಲ್ಲಿಗೆ ಮತ್ತೆ ಹೋಗುವುದು ಸಾಧ್ಯವಾ ನೀವೇ ಹೇಳಿ, ಪಕ್ಷದಿಂದಲೇ ಉಚ್ಚಾಟನೆ ಮಾಡಿರುವಾಗ ಅಲ್ಲಿಗೆ ಹೋಗುವ ಮಾತಿಲ್ಲ ಎಂದರು.

ಇನ್ನು ಲಕ್ಷಾಂತರ ಅನುದಾನವಿದ್ದು ಅದನ್ನು ಬಳಸಿಕೊಂಡು ಕೆಲಸಗಳೆಲ್ಲವನ್ನು ಮುಗಿಸಿದ ನಂತರವೇ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ. ಅಲ್ಲಿಯವರೆಗೂ ನನ್ನ ಕೆಲಸವನ್ನು ಜನರೊಟ್ಟಿಗೆ ನಿರಂತರವಾಗಿ ಮಾಡುತ್ತಾ ಇದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದರ್ಶನ್, ಬಾಲಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!