ಸಿಸಿಟಿವಿ ಕಿತ್ತು ದೇಗುಲದ ಚಿನ್ನ ಕದ್ದ ಕಳ್ಳರು

171

Get real time updates directly on you device, subscribe now.


ಶಿರಾ: ತಾಲೂಕಿನ ಮೊಸರುಕುಂಟೆ ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ದೇವರ ವಿಗ್ರಹಕ್ಕೆ ಹಾಕಿದ ತಾಳಿ ಸೇರಿದಂತೆ 300 ಗ್ರಾಂ. ಚಿನ್ನದ ಒಡವೆಗಳು ಕಳುವಾಗಿರುವ ಘಟನೆ ಯುಗಾದಿ ದಿನದಂದೇ ನಡೆದಿದೆ.
ಹಬ್ಬದ ಅಂಗವಾಗಿ ಬುಧವಾರದಂದು ದೇವರಿಗೆ ಒಡವೆಗಳನ್ನು ಹಾಕಿ ಅಲಂಕರಿಸಲಾಗಿತ್ತು. ವರ್ಷದ ಮೊದಲ ದಿನ ವಿಶೇಷ ಪೂಜೆ ಕೂಡ ನಡೆದಿತ್ತು. ಆದರೆ, ಅದೇ ದಿನ ರಾತ್ರಿ ಚಾಲಾಕಿ ಕಳ್ಳರು, ದೇವಸ್ಥಾನದ ಗೇಟನ್ನು ಮೀಟಿ ಬೀಗವನ್ನು ಒಡೆದು ಕಳ್ಳತನ ನಡೆಸಿದ್ದಾರೆ. ಇಷ್ಟೇ ಅಲ್ಲದೆ ದೇವಾಲಯಕ್ಕೆ ಅಳವಡಿಸಿದ್ದ ಸಿಸಿಟಿವಿ ಕನೆಕ್ಷನ್ ಕಟ್ ಮಾಡಿ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿದ್ದಾರೆ.

ಗುರುವಾರ ಬೆಳಗ್ಗೆ ದೇವಾಲಯದ ಕಸ ಗುಡಿಸಲು ಹೋದ ಪೂಜಾರಪ್ಪನ ಹೆಂಡತಿಗೆ ಗೇಟ್ ಬೀಗ ಒಡೆದು, ಗೇಟನ್ನು ಮೀಟಿರುವುದು ಗಮನಕ್ಕೆ ಬಂದಿದೆ.
ಗ್ರಾಮದ ಮಧ್ಯ ಭಾಗದಲ್ಲಿದ್ದು, ಸದಾ ಜನರ ಓಡಾಟ ಇರುವ ಈ ಪ್ರದೇಶದಲ್ಲೇ ಕಳ್ಳತನ ನಡೆದಿರುವುದಕ್ಕೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ತಾವರೆಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆರಳಚ್ಚು ತಜ್ಞರ ಸಹಾಯ ಪಡೆದು ಕಳ್ಳರನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!