ಅಪಘಾತ: ಓರ್ವ ಸ್ಥಳದಲ್ಲಿ ಸಾವು

155

Get real time updates directly on you device, subscribe now.


ಗುಬ್ಬಿ: ಖಾಸಗಿ ಕಾಲೇಜು ಬಸ್ಸೊಂದು ಟ್ರ್ಯಾಕ್ಟರ್ ಗುದ್ದಿದ್ದರಿಂದ ಟ್ರ್ಯಾಕ್ಟರ್ ಚಾಲಕ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ಮೃತನನ್ನು ಕುಣಿಗಲ್ ತಾಲ್ಲೂಕಿನ ಮಂಟ್ಯಾ ಗ್ರಾಮದ ಹೇಮಂತ್ (25) ಎಂದು ಗುರ್ತಿಸಲಾಗಿದೆ.

ಶುಕ್ರವಾರ ಸಂಜೆ ತಾಲ್ಲೂಕಿನ ಕೆ.ಜಿ.ಟೆಂಪಲ್ ಬಳಿಯ ಕಡಬ ಗೇಟ್ ನಲ್ಲಿ ಗುಬ್ಬಿ ಕಡೆಯಿಂದಲೇ ಬಸ್ಸು ಮತ್ತು ಟ್ರ್ಯಾಕ್ಟರ್ ಚಲಿಸುತ್ತಿದ್ದು, ಬಸ್ಸು ಹಿಂಬದಿಯಿಂದ ಟ್ರ್ಯಾಕ್ಟರ್ ಗೆ ಗುದ್ದಿದ ಪರಿಣಾಮ ಚಾಲಕನು ರಸ್ತೆಗೆ ಬಿದ್ದು ಮೃತಪಟ್ಟಿದ್ದಾನೆ.
ಬಸ್ಸಿನಲ್ಲಿ ಚಾಲಕನನ್ನು ಹೊರತುಪಡಿಸಿ ಬೇರೆ ಯಾರು ಇರಲಿಲ್ಲ. ಅಪಘಾತದ ನಂತರ ಬಸ್ಸಿನ ಚಾಲಕನು ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸಿ.ಎಸ್.ಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಶವವನ್ನು ಗುಬ್ಬಿಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!