ಕೆರೆಯಲ್ಲಿ ಮಹಿಳೆ ಶವ ಪತ್ತೆ

321

Get real time updates directly on you device, subscribe now.


ಗುಬ್ಬಿ: ಕೆರೆಯಲ್ಲಿ ತೇಲಿದ ಗರ್ಭಿಣಿ ಗೃಹಿಣಿಯ ಶವ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಮಧುಶ್ರೀ (25) ಎಂದು ಗುರುತಿಸಲಾಗಿದೆ. ಮೃತ ಮಧುಶ್ರೀ ಚಿಕ್ಕನಾಯಕನ ಹಳ್ಳಿ ತಾಲ್ಲೂಕು ಅಣೆಕಟ್ಟೆಯವರಾಗಿದ್ದು 4 ವರ್ಷಗಳ ಹಿಂದೆ ನಿಟ್ಟೂರು ಹೋಬಳಿ ಅಮ್ಮನಹಳ್ಳಿ ಗ್ರಾಮದ ಶಿಕ್ಷಕರಾಗಿದ್ದ ಯೋಗೀಶ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು.

ದಂಪತಿಗೆ 2 ವರ್ಷದ ಒಂದು ಗಂಡು ಮಗು ಇದೆ. ಭಾನುವಾರ ಸಂಜೆ ಯೋಗೀಶ್ ಮೃತ ಮಧುಶ್ರೀ ತಂದೆ ತಾಯಿಗೆ ಕರೆ ಮಾಡಿ ಹೆಂಡತಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ ತಕ್ಷಣ ತವರು ಮನೆಯವರು ಅಮ್ಮನಹಳ್ಳಿಗೆ ಬಂದು ಹುಡುಕಾಡುವಷ್ಟರಲ್ಲಿ ಮಧುಶ್ರೀ ಶವವಾಗಿ ಕೆರೆಯಲ್ಲಿ ತೇಲುತ್ತಿರುವ ವಿಚಾರ ತಿಳಿದು ಬಂದಿದೆ.
ಮಧುಶ್ರೀ ಅವರ 2 ವರ್ಷದ ಗಂಡುಮಗುವೂ ನಾಪತ್ತೆಯಾಗಿದ್ದು, ಎಲ್ಲಿದೆ, ಏನಾಗಿದೆ ಎಂಬ ಸುಳಿವು ಸಿಗುತ್ತಿಲ್ಲ ಎಂದು ಮಧುಶ್ರೀ ತಂದೆ ತಾಯಿ ದೂರಿದ್ದಾರೆ. ಯೋಗೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತರ ತಂದೆ ತಾಯಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಗಳ ಸಾವಿಗೆ ಆಕೆಯ ಗಂಡ ಯೋಗೀಶ್ ಕಾರಣನಾಗಿದ್ದು, ಆತನ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!