ತೆಂಗಿನಾರು ಸಂಸ್ಕರಣೆ ಘಟಕಕ್ಕೆ ಬೆಂಕಿ

107

Get real time updates directly on you device, subscribe now.


ಕುಣಿಗಲ್: ಬೆಂಕಿ ಅವಘಡದಿಂದಾಗಿ ತೆಂಗಿನಾರು ಸಂಸ್ಕರಣೆ ಮಾಡುವ ಘಟಕ ಪೂರ್ತಿ ಬೆಂಕಿಗೆ ಆಹುತಿಯಾಗಿ, ಎರಡುವರೆ ಕೋಟಿ ರೂ. ನಷ್ಟ ಸಂಭವಿಸಿರುವ ಘಟನೆ ನಡೆದಿದೆ.

ತಾಲೂಕಿನ ಹುತ್ರಿದುರ್ಗ ಹೋಬಳಿಯ ಕುಲುಮೆಪಾಳ್ಯದಲ್ಲಿ ಆಂಜನಪ್ಪ ಎಂಬುವರಿಗೆ ಸೇರಿದ ಆಗ್ರೋ ಇಂಡ್ ಪ್ರೈ ಕಂಪನಿಯು ತೆಂಗಿನ ಸಿಪ್ಪೆಯಿಂದ ನಾರು, ಪುಡಿ ಮಾಡುವ ಘಟಕ ಕಳೆದೊಂದು ವರ್ಷದಿಂದ ಕಾರ್ಯಾ ಮಾಡುತ್ತಿತ್ತು, ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ನಿಯಂತ್ರಣಕ್ಕೆ ಕುಣಿಗಲ್, ಮಾಗಡಿಯಿಂದ ಐದಕ್ಕೂ ಹೆಚ್ಚು ಅಗ್ನಿಶಾಮಕ ಯಂತ್ರಗಳು ಸುಮಾರು ಹತ್ತು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸಿದೆ. ಅಗ್ನಿಇವಘಡಕ್ಕೆ ವಿದ್ಯುತ್ ಶಾಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!