ವಿಶೇಷಚೇತನರಿಗೆ ವ್ಹೀಲ್ಚೇರ್ ಕ್ರಿಕೆಟ್ ಟೂರ್ನಮೆಂಟ್

79

Get real time updates directly on you device, subscribe now.


ತುಮಕೂರು: ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ, ತುಮಕೂರು, ಜಿಲ್ಲಾ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ವಿಕಲಚೇತರರಾಗಿ ಎರಡು ದಿನಗಳ ವ್ಹೀಲ್ ಚೇರ್ ಕ್ರಿಕೆಟ್ ಟೂರ್ನಮೆಂಟ್ನ್ನು ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಎರಡು ದಿನಗಳ ಈ ಟೂರ್ನಿಯಲ್ಲಿ ತುಮಕೂರು ಸುತ್ತಮುತ್ತಲಿನ ನಾಲ್ಕು ತಂಡ ಭಾಗವಹಿಸಿದ್ದು, ನಮ್ಮನಿಧಿ ಟ್ರಸ್ಟ್ ನ ಸಹಯೋಗದಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ತುಮಕೂರು, ಬಳ್ಳಾರಿ, ಬೆಂಗಳೂರು ಮತ್ತು ಬೆಳಗಾವಿಯ ಸುಮಾರು 70 ಜನ ದಿವ್ಯಾಂಗ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಇವರಲ್ಲಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಆಟವಾಡಿರುವ ಕ್ರೀಡಾಪಟುಗಳು ಭಾಗವಹಿಸಿರುವುದು ವಿಶೇಷ, ಇವರಿಗೆ ಶ್ರೀಸಿದ್ದಗಂಗಾ ಮಠದಲ್ಲಿ ವಸತಿ ವ್ಯವಸ್ಥೆ ಮಾಡಿದ್ದು, ಊಟದ ವ್ಯವಸ್ಥೆಯನ್ನು ಸಹ ಸಮಿತಿ ವತಿಯಿಂದ ಮಾಡಲಾಗಿದೆ.

ನಾಲ್ಕು ತಂಡಗಳು ಭಾಗವಹಿಸುವ ಈ ಟೂರ್ನಿಯ ಮೊದಲ ವಿಜೇತರಿಗೆ 20 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ಎರಡನೇ ಬಹುಮಾನವಾಗಿ 10 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ವಿಕಲಾಂಗರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಈ ಟೂರ್ನಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಟೂರ್ನಿ ಆಯೋಜಿಸುವ ಇಚ್ಚೆ ಇದೆ ಎಂದು ಕ್ರೀಡಾಕೂಟದ ಆಯೋಜಕರಾದ ನಿವೇದಿತ ತಿಳಿಸಿದ್ದಾರೆ.

ಕ್ರೀಡಾ ಪ್ರೋತ್ಸಾಹಕ ಧನಿಯಕುಮಾರ್ ಮಾತನಾಡಿ, ಇಂದು ವಿವಿಧ ವಿಕಲಚೇತನ ಕ್ರೀಡಾ ಸಂಸ್ಥೆಗಳ ಸಹಕಾರದೊಂದಿಗೆ ದಿವ್ಯಾಂಗ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿದೆ. ಇಂತಹ ನೂರಾರು ಟೂರ್ನಿಗಳು ಈ ಮೈದಾನದಲ್ಲಿ ನಡೆದಿವೆ. ಆದರೆ ವಿಕಲಚೇತನ ಟೂರ್ನಿ ಇದೇ ಮೊದಲ ಬಾರಿ ಆಯೋಜಿಸಿರುವುದು ಸಂತೋಷದ ವಿಷಯ. ಎಲ್ಲವೂ ಸರಿ ಇರುವವರೇ ಇಂದು ಮೊಬೈಲ್ಗೆ ಅಂಟಿಕೊಂಡು ಕುಳಿತಿರುವಾಗ ವ್ಹೀಲ್ಚೇರ್ ಮೇಲೆ ಕುಳಿತು ಕ್ರಿಕೆಟ್ ಆಟವಾಡುತ್ತಿರು ವುದನ್ನು ನೋಡಿದರೆ ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ. ಇಂತಹ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪಾಲಿಕೆ ಮತ್ತು ಸರಕಾರ ವಿಕಲಚೇತನರ ಶೇ.3ರ ಅನುದಾನದಲ್ಲಿ ಹೆಚ್ಚಿನ ಧನಸಹಾಯ ಮಾಡಬೇಕೆಂದು ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!