ದಿವ್ಯಾಂಗರ ಕ್ರಿಕೆಟ್- ಬಳ್ಳಾರಿ ಪ್ರಥಮ, ಬೆಳಗಾವಿ ದ್ವಿತೀಯ

71

Get real time updates directly on you device, subscribe now.


ತುಮಕೂರು: ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಏಪ್ರಿಲ್ 08- 09 ರಂದು ನಡೆದ ದಿವ್ಯಾಂಗರ ವ್ಹೀಲ್ ಚೇರ್ ಕ್ರಿಕೆಟ್ ನಲ್ಲಿ ಬಳ್ಳಾರಿ ಬ್ಲಾಸ್ಟರ್ಸ್ ಪ್ರಥಮ ಬಹುಮಾನ ಪಡೆದರೆ, ಬೆಳಗಾವಿ ಬುಲ್ಸ್ ತಂಡ ದ್ವಿತೀಯ ಬಹುಮಾನ ಪಡೆಯಿತು.

ಜಿಲ್ಲಾ ದಿವ್ಯಾಂಗ ಸ್ಪೋರ್ಟ್ಸ್ ಅಕಾಡೆಮಿ ಮತ್ತು ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಬೆಂಗಳೂರು ಹಾಗೂ ನಮ್ಮ ನಿಧಿ ಟ್ರಸ್ಟ್ ತುಮಕೂರು ರಾಜ್ಯಾಧ್ಯಕ್ಷರು ಕರ್ನಾಟಕ ಹಾಲುಮತ ಸಹಕಾರ ಮಹಾಸಭಾ ಸುಕನ್ಯಾ ಕುಮಾರಿ.ಜಿ.ಕೆ. ಇವರ ಸಹಯೋಗದೊಂದಿಗೆ ವ್ಹೀಲ್ ಚೇರ್ ಕ್ರಿಕೆಟ್ ಪಂದ್ಯಾವಳಿಯನ್ನು ಏ.8 ಮತ್ತು 9 ರಂದು ಆಯೋಜಿಸಿ, ಬಳ್ಳಾರಿ, ಬೆಂಗಳೂರು, ಬೆಳಗಾವಿ ಮತ್ತು ತುಮಕೂರು ತಂಡ ಭಾಗವಹಿಸಿದ್ದ ಈ ಕ್ರೀಡಾಕೂಟದಲ್ಲಿ ಕ್ರೀಡಾಪುಟಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಪ್ರಥಮ ಬಹುಮಾನವನ್ನು ಬಳ್ಳಾರಿ ಬ್ಲಾಸ್ಟರ್ಸ್ ನಾಯಕರಾದ ಮಂಜುನಾಥ್ 20,000 ಬಹುಮಾನ ಪಡೆದರೆ, ದ್ವಿತೀಯ ಬಹುಮಾನವನ್ನು ಬೆಳಗಾವಿ ಬುಲ್ಸ್ ತಂಡದ ನಾಯಕರದ ಹರೀಶ್ 10,000 ರೂ. ಪಡೆದರು. ವಿಜೇತ ತಂಡಗಳಿಗೆ ಜಿ.ಕೆ. ಸುಕನ್ಯಾಕುಮಾರಿ ಬಹುಮಾನ ವಿತರಿಸಿದರು. ಪಂದ್ಯಾವಳಿ ಯಶಸ್ವಿಯಾಗಲು ಸಹಕರಿಸಿದ ಆದಿಲ್, ಪ್ರಕಾಶ್, ಜೆ.ಪಿ.ನಿವೇದಿತಾ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!