ಪಕ್ಷೇತರ ಅಭ್ಯರ್ಥಿಯಾಗಿ ನರಸೇಗೌಡ ನಾಮಪತ್ರ ಸಲ್ಲಿಕೆ

123

Get real time updates directly on you device, subscribe now.


ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನರಸೇಗೌಡ ನಾಮಪತ್ರ ಸಲ್ಲಿಸಿದರು, ಆ ಮೂಲಕ ಜೆಡಿಎಸ್ ಅಭ್ಯರ್ಥಿಗೆ ಸೆಡ್ಡು ಹೊಡೆದಿದ್ದಾರೆ.

ಜೆಡಿಎಸ್ ನಲ್ಲಿ ಗೊಂದಲ, ಭಿನ್ನಮತ, ಅಸಮಾಧಾನ ಮುಂದುವರೆದಿದ್ದು, ನಾಯಕರ ನಡುವಿನ ಪ್ರತಿಷ್ಟೆ ಮುಂದುವರೆದಿದೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದಿಲ್ಲ. ಕಾರ್ಯಕರ್ತರನ್ನು ಕಡೆಗಣಿಸುತ್ತಾರೆ ಎಂಬ ಆರೋಪ ಬಹಳ ಹಿಂದಿನಿಂದಲು ಇದೆ. ಇದರ ಮಧ್ಯೆ ಮುಖಂಡ ನರಸೇಗೌಡ ಅವರು ಗೋವಿಂದರಾಜು ನಡವಳಿಕೆಗೆ ಆಕ್ರೋಶ ಹೊರಹಾಕಿದ್ದರು. ಚುನಾವಣೆಯಲ್ಲಿ ಗೋವಿಂದರಾಜು ಪರ ಕೆಲಸ ಮಾಡಲ್ಲ. ನಾನೇ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದು ಹೇಳಿದ್ದರು. ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ದರ್ಶನ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕವಿತಾ ನರಸೇಗೌಡ, ರೇಖಾ ಅಮೋಘ್, ನಾಗೇಂದ್ರ, ಭೈರೇಶ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!