ಭೀಕರ ಅಪಘಾತ- ಐದು ಮಂದಿ ಸಾವು

ಖಾಸಗಿ ಬಸ್- ಕಾರು ನಡುವೆ ಡಿಕ್ಕಿ ಸಂಭವಿಸಿ ದುರಂತ

448

Get real time updates directly on you device, subscribe now.


ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಾರಿಗೆ ಡಿಕ್ಕಿ ಹೊಡೆದು 5 ಮಂದಿ ಸಾವಿಗೀಡಾಗಿರುವ ಘಟನೆ ಕ್ಯಾತ್ಸಂದ್ರ ಸಮೀಪದ ದೇವರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಶಿರಾ ದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಹಾಗೂ ಬೆಂಗಳೂರಿನಿಂದ ತುಮಕೂರು ಕಡೆಗೆ ಬರುತ್ತಿದ್ದ ಇನ್ನೋವಾ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಮೃತ ದೇಹಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಕಂಡು ಬಂದಿತ್ತು.

ಮೃತಪಟ್ಟವರನ್ನು ಚಳ್ಳಕೆರೆ ಮೂಲದ ಗೋವಿಂದ ನಾಯ್ಕ (58), ತಿಪ್ಪಮ್ಮ (52), ದಿನೇಶ್ (12), ಪಿಂಕಿ (15) ಹಾಗೂ ಕುಣಿಗಲ್ ಮೂಲದ ವಾಹನ ಚಾಲಕ ರಾಜೇಶ್ (36) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡಿದ್ದ ಕಡೂರು ತಾಲ್ಲೂಕಿನ ಶ್ರೀಕಂಠಪ್ಪ, ದಾವಣಗೆರೆ ವಾಸಿ ಮಂಜುನಾಥ್, ಶಿರಾ ತಾಲ್ಲೂಕು ವಾಸಿ ಬುಡ್ಡಮ್ಮ, ಭಾಗ್ಯಮ್ಮ, ಮಂಜುನಾಥ್, ಕರಿಯಮ್ಮ ಹಾಗೂ ಮಂಜುಳಾ ಎಂದು ಗುರುತಿಸಲಾಗಿದೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!