ಬೆದರಿಸಿ ಹಣಕ್ಕೆ ಬೇಡಿಕೆ- ಇಬ್ಬರ ಬಂಧನ

144

Get real time updates directly on you device, subscribe now.


ಕುಣಿಗಲ್: ತಾಲ್ಲೂಕಿನ ಕಗ್ಗೆರೆಯ ಶ್ರೀಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಿತನ ಪತ್ನಿ ನೀಡಿದ ದೂರಿನ ಮೇಲೆ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ.

ಕಗ್ಗೆರೆಯ ಶ್ರೀಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಕೆಲಸ ಮಾಡುತ್ತಿರುವ ಅರ್ಚಕರೊಬ್ಬರಿಗೆ ಅವರು ಮಹಿಳೆಯರೊಂದಿಗೆ ಮಾತನಾಡಿರುವ ವಾಯ್ಸ್ ರೆಕಾರ್ಡ್ನ್ನು ಮತ್ತೊಬ್ಬರಿಂದ ಪಡೆದುಕೊಂಡ ವ್ಯಕ್ತಿಯೊಬ್ಬ ಅರ್ಚಕನಿಗೆ ಕಳಿಸಿ ಬೆದರಿಸಿ ಹಣ ಗಳಿಸುವ ಉದ್ದೇಶದಿಂದ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ನಿನ್ನ ವಿರುದ್ಧ ಪತ್ರಿಕೆ, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ, ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ರಾಜಿ ಸಂಧಾನ ನಡೆದು ಬಗೆಹರಿಯದ ಕಾರಣ ಹಣಕ್ಕೆ ಬೇಡಿಕೆ ಇಟ್ಟಿದ್ದವರ ಒತ್ತಡ, ಬೆದರಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಅರ್ಚಕನ ಪತ್ನಿ ನೀಡಿದ ದೂರಿನ ಅನ್ವಯ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರತ್ಯಕ್ಷವಾಣಿ ಪತ್ರಿಕೆಯ ಕುಶ ಹಾಗೂ ಸಹಕರಿಸಿದ ಎಡೆಯೂರಿನ ರಘು ಎಂಬುವವರನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!