ಸಾವಿನಲ್ಲಿ ಒಂದಾದ ದಂಪತಿ

ಅಪಘಾತದಲ್ಲಿ ಪತ್ನಿ ಸಾವು- ಮನನೊಂದು ಪತಿ ಆತ್ಮಹತ್ಯೆ

298

Get real time updates directly on you device, subscribe now.


ತಿಪಟೂರು: ರೈಲ್ವೆ ಇಲಾಖೆಯಲ್ಲಿ ಆರಕ್ಷಕರಾಗಿ ತಿಪಟೂರಿನ ರೈಲ್ವೆ ನಿಲ್ದಾಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಸುಧಾರಾಣಿ (28) ಹಾಗೂ ಅರಸೀಕೆರೆ ತಾಲ್ಲೂಕಿನ ಕೆಂಕೆರೆ ಗ್ರಾಮದ ಚೇತನ್ (32) ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು.

ಇತ್ತೀಚೆಗೆ ಕೆಂಕೆರೆ ಗ್ರಾಮದ ಅದ್ದೂರಿ ಬೆಂಕಿ ಬ್ರಹ್ಮಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ರಾತ್ರಿ ವೇಳೆ ಹಿಂತಿರುಗುತ್ತಿದ್ದಾಗ ಚಿಂದೆನಹಳ್ಳಿ ಗಡಿ ಬಳಿ ಬೈಕ್ ಅಪಘಾತವಾಗಿ ಸುಧಾರಾಣಿ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಗುರುವಾರ ರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟರು.

ಸುದ್ದಿ ತಿಳಿದ ಪತಿ ಚೇತನ್ ಪತ್ನಿಯ ಸಾವಿನ ದುಃಖ ಸಹಿಸಲಾಗದೆ ತಮ್ಮ ಮನೆಯಲ್ಲಿ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ. ಇಬ್ಬರ ಸಾವಿನಿಂದ ಯಾರು ಆಸರೆ ಇಲ್ಲದ ಮಧ್ಯಮ ವರ್ಗದ ಎರಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಇವರ ಅಂತ್ಯ ಸಂಸ್ಕಾರ ಕೆಂಕೆರೆ ಗ್ರಾಮದಲ್ಲಿ ನಡೆಯಿತು. ದೇಶ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಕೀರ್ತಿಗಳಿಸಿದ್ದ ಚೇತನ್ ಹಾಗೂ ಆರಕ್ಷಕ ಠಾಣೆಯಲ್ಲಿ ಮಹಿಳಾ ಜನಪರ ಸ್ನೇಹಿಯಾಗಿ ಉತ್ತಮ ಸೇವೆ ಸಲ್ಲಿಸಿದ ಸುಧಾರಾಣಿ ಇಬ್ಬರು ಸಾವಿನಲ್ಲಿ ಒಂದಾಗಿದ್ದಾರೆ. ಇಡೀ ಗ್ರಾಮವೇ ಇವರ ಸಾವಿಗೆ ದುಃಖ ವ್ಯಕ್ತಪಡಿಸಿತ್ತು.

Get real time updates directly on you device, subscribe now.

Comments are closed.

error: Content is protected !!