ಚುನಾವಣಾ ವೆಚ್ಚ ವೀಕ್ಷಕರೊಂದಿಗೆ ಜಿಲ್ಲಾಧಿಕಾರಿ ಸಭೆ

ವೀಕ್ಷಕರಿಗೆ ತುಮಕೂರು ಜಿಲ್ಲೆಯ ಸಮಗ್ರ ಮಾಹಿತಿ ನೀಡಿದ ಡೀಸಿ

103

Get real time updates directly on you device, subscribe now.


ತುಮಕೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಜಿಲ್ಲೆಗೆ ಆಗಮಿಸಿರುವ ವೆಚ್ಚ ವೀಕ್ಷಕರೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಸಭೆ ನಡೆಸಿ ಚರ್ಚಿಸಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಗೆ ಆಗಮಿಸಿರುವ ವೆಚ್ಚ ವೀಕ್ಷಕರಾದ ಐಆರ್ಎಸ್ ಅಧಿಕಾರಿಗಳಾದ ತ್ಸೆರಿಂಗ್ ಜೋರ್ಡನ್ ಬುಟಿಯಾ, ರೆಂದಮ್ ವೆಂಕಪ್ರಧಾಮೇಶ್ ಭಾನು, ನವಾಬ್ ಸಿಂಗ್, ಮಾಯಾಂಕ್ ಶರ್ಮ, ಯಾಸರ್ ಅರಾಫತ್, ಎಂ.ಸ್ವಾಮಿನಾಥನ್ ಮತ್ತು ಸತೇಂದ್ರ ಸಿಂಗ್ ಮೆಹರಾ ಅವರನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸ್ವಾಗತಿಸಿ ಜಿಲ್ಲೆಯ ಸಮಗ್ರ ಪರಿಚಯ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 11 ವಿಧಾನ ಸಭಾ ಕ್ಷೇತ್ರಗಳಿದ್ದು, 2683 ಮತಗಟ್ಟೆಗಳಿದ್ದು, 11,17,866 ಪುರುಷ, 11,22,880 ಮಹಿಳಾ, ಇತರೆ 6 ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ ಏಪ್ರಿಲ್ 14ಕ್ಕೆ ಒಟ್ಟು 22,40,852 ಮತದಾರರಿದ್ದಾರೆ ಎಂದು ವಿವರಿಸಿದರು. ಈ ಪೈಕಿ ಕೊರಟಗೆರೆ ಮತ್ತು ಪಾವಗಡ ಪ.ಜಾತಿ ಮೀಸಲಾತಿ ಕ್ಷೇತ್ರವಾಗಿದ್ದು, ಉಳಿದೆಲ್ಲವೂ ಸಾಮಾನ್ಯ ವರ್ಗಕ್ಕೆ ಸೇರಿರುತ್ತವೆ ಎಂದು ವಿವರಿಸಿದರು.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 11 ಆರ್ಓಗಳು ಹಾಗೂ 12 ಎಆರ್ಓಗಳು (ತು.ನಗರ, ಗ್ರಾ) ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದ ಜಿಲ್ಲಾ ಚುನಾವಣಾಧಿಕಾರಿ, ಅಂತರ್ ರಾಜ್ಯ 12, ಅಂತರ್ ಜಿಲ್ಲೆ 17 ಸೇರಿದಂತೆ ಒಟ್ಟು 45 ಚೆಕ್ ಪೋಸ್ಟ್ ಗಳನ್ನು ಜಿಲ್ಲೆಯಲ್ಲಿ ತೆರೆಯಲಾಗಿದ್ದು, ಒಟ್ಟು 232 ಸೆಕ್ಟರ್ ಅಧಿಕಾರಿಗಳು, 18 ಎಇಓ, 18 ಅಕೌಂಟಿಂಗ್ ಟೀಮ್, 45 ಎಸ್ಎಸ್ಟಿ, 52 ಎಫ್ಎಸ್ಟಿ, 26 ಇಎಸ್ಟಿ ಮತ್ತು 11 ವಿವಿಟಿ ತಂಡ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಇದುವರೆವಿಗೂ ಜಿಲ್ಲೆಯಲ್ಲಿ ಎಂಸಿಸಿ ಮತ್ತು ಕೇಬಲ್ ಆಪರೇಟರ್, ಪ್ರಿಂಟರ್ ಗಳ ಸಭೆ, ಎಸ್ಎಸ್ಟಿ, ಎಫ್ಎಸ್ಟಿ, ಲೆಕ್ಕಪತ್ರ, ಚುನಾವಣಾ ವೆಚ್ಚ ಇತ್ಯಾದಿ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಬಹುತೇಕ ಎಲ್ಲಾ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 29-3-2023 ರಿಂದ 14-4- 2023 ರವರೆಗೆ ಒಟ್ಟು 92,08,209 ಮೊತ್ತದ 33,763.54 ಮದ್ಯ ವಶಪಡಿಸಿಕೊಳ್ಳಲಾಗಿದೆ. 81,33,000 ನಗದು ವಶಪಡಿಸಿಕೊಳ್ಳಲಾಗಿದೆ ಹಾಗೂ 63,11,312 ಮೊತ್ತದ ಉಚಿತ ಉಡುಗೊರೆಗಳಾದ 720 ಎಲ್ಇಡಿ ಬಲ್ಬ್, 2321 ಸೀರೆ, ಬಟ್ಟೆ, ಗೃಹೋಪಯೋಗಿ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಏಪ್ರಿಲ್ 14ರ ವರೆಗೆ ಬಿಜೆಪಿ ಪಕ್ಷಕ್ಕೆ 5,17,374 ರೂ, ಐಎನ್ಸಿ ಪಕ್ಷಕ್ಕೆ 8,20,055 ರೂ, ಜೆಡಿಎಸ್ ಪಕ್ಷಕ್ಕೆ 10,94,216 ರೂ. ಹಾಗೂ ಇತರೆ ಪಕ್ಷಗಳಿಗೆ 710 ಸೇರಿದಂತೆ ಒಟ್ಟಾರೆ 24,32,355 ರೂ. ಗಳನ್ನು ವಿವಿಧ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ವಿದ್ಯಾಕುಮಾರಿ, ಪಾಲಿಕೆ ಆಯುಕ್ತ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಸೇರಿದಂತೆ 11 ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!