ಗೋವಿಂದಣ್ಣ ತಪ್ಪು ಮಾಡಿಲ್ಲ, ಒಳ್ಳೆಯವರು: ರೇಷ್ಮಾ

106

Get real time updates directly on you device, subscribe now.


ತುಮಕೂರು: ತಮ್ಮೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದ ಯುವತಿ ಇದೀಗ ಯು ಟರ್ನ್ ಹೊಡೆದಿದ್ದು ಗೋವಿಂದರಾಜು ಏನು ತಪ್ಪಿಲ್ಲ, ಕೇವಲ ಅವರು ಪ್ರಚಾರ ವಿಚಾರವಾಗಿ ಮಾತನಾಡಿದ್ದಾರೆ. ಅದನ್ನು ತಪ್ಪಾಗಿ ಭಾವಿಸಿದ ನಾನು ಗೋವಿಂದರಾಜು ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಅವರ ಘನತೆಗೆ ಧಕ್ಕೆ ಬರುವಂತಹ ಕೆಲಸ ಮಾಡಿದ್ದೇನೆ. ಆದ್ದರಿಂದ ಗೋವಿಂದರಾಜು ಬಳಿ ಕ್ಷಮೆ ಕೇಳುತ್ತೇನೆ ಎಂದು ನಗರದಲ್ಲಿ ಗೋವಿಂದರಾಜು ಮೇಲೆ ಆರೋಪ ಮಾಡಿದ ಮಹಿಳೆ ರೇಷ್ಮಾ ಹೇಳಿದ್ದಾರೆ.

ಈ ಬಗ್ಗೆ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು ಗೋವಿಂದರಾಜು ಅವರು ತಮ್ಮೊಂದಿಗೆ ಯಾವುದೇ ರೀತಿ ಅಶ್ಲೀಲವಾಗಿ ಮಾತನಾಡಿಲ್ಲ, ಅವರು ಕೇವಲ ಚುನಾವಣಾ ಪ್ರಚಾರದ ವಿಷಯವಾಗಿ ಮಾತನಾಡಿದ್ದು, ನಾನು ಅವರನ್ನು ಎಷ್ಟು ಬಾರಿ ಜನರನ್ನು ಸೇರಿಸಿದ್ದೇನೆ. ಬನ್ನಿ ಎಂದು ಕರೆದರೂ ಅವರು ಬರದಿರುವ ಕಾರಣ ನನಗೆ ಕೋಪ ಬಂದು ಹಾಗೂ ಅವರು ಮಾತನಾಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಅವರ ಘನತೆಗೆ ಕುಂದು ತಂದಿದ್ದೇನೆ. ಅದರಿಂದ ಗೋವಿಂದರಾಜು ಹಾಗೂ ಅವರ ಕುಟುಂಬದವರ ಬಳಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!