ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ

75

Get real time updates directly on you device, subscribe now.


ತುಮಕೂರು: ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಾರಿ ಬದಲಾವಣೆ ಕಾಣುತ್ತಿದ್ದು, ಸ್ಮಾರ್ಟ್ ಸಿಟಿಯ ಮೂಲಕ ತುಮಕೂರು ಸಹ ಪ್ರಗತಿಯ ಹಾದಿಯಲ್ಲಿದೆ ಎಂದು ಮಧ್ಯ ಪ್ರದೇಶದ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯ್ ಬರ್ಜಿಯ ತಿಳಿಸಿದರು.
ನಗರದ ಭಾಜಪ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿಗಳ ಜೊತೆಗೆ ಸ್ಮಾರ್ಟ್ ವಿಲೇಜ್ ಗಳ ನಿರ್ಮಾಣಕ್ಕು ಬಿಜೆಪಿ ಒತ್ತು ನೀಡಿದ್ದು, ಇದೇ ವೇಗದಲ್ಲಿ ವಿಕಾಸ ಮುಂದುವರೆದರೆ 2047 ಕ್ಕೆ ಅಂದರೆ ಸ್ವಾತಂತ್ರ್ಯ ಬಂದ ನೂರನೇ ವರ್ಷಕ್ಕೆ ಭಾರತ ಪ್ರಪಂಚದ ನಂ.1 ರಾಷ್ಟ್ರವಾಗಲಿದೆ ಎಂದರು.

ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ನಂತರ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ವೇಗ ಪಡೆದುಕೊಂಡಿದೆ. ಇದರ ಫಲವಾಗಿ ಜನರಿಗೆ ಸಮಯದ ಜೊತೆಗೆ ಇಂಧನದ ಉಳಿತಾಯ ಸಹ ಆಗುತ್ತಿದೆ. ಅಮೆರಿಕಾದಂತಹ ಆರ್ಥಿಕತೆಯೇ ಕುಸಿದು ಜನರು ತತ್ತರಿಸುತ್ತಿರುವ ಕಾಲದಲ್ಲಿ ಭಾರತದ ಆರ್ಥಿಕತೆ ಅತ್ಯಂತ ಸ್ಥಿರವಾಗಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಸಧೃಡ ಆಡಳಿತ, ಡಬಲ್ ಇಂಜಿನ್ ಸರಕಾರ ಎಲ್ಲಾ ರೀತಿಯಿಂದ ದೇಶದ ವಿಕಾಸವನ್ನು ಬಯಸುತ್ತಾ, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂದ ಕೈಲಾಸ್ ವಿಜಯ್ ಬರ್ಜಿಯ ನುಡಿದರು.

ಕರ್ನಾಟಕ ದಲ್ಲಿ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸಾಕಷ್ಟು ಕೆಲಸ ಮಾಡಿದೆ. ಜನರ ಜೀವನ ಮಟ್ಟ ಸುಧಾರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಜನರು ಬಿಜೆಪಿ ಕೆಲಸಗಳನ್ನು ಮೆಚ್ಚಿಕೊಂಡಿದ್ದು ಈ ಬಾರಿಯೂ ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್ ಸಜ್ಜನ ರಾಜಕಾರಣಿಯಾಗಿದ್ದು, ಜನರ ಸಮಸ್ಯೆ ಅರಿತು ಕೆಲಸ ಮಾಡಿದ್ದಾರೆ. ಮುಂದೆಯೂ ಈ ಕ್ಷೇತ್ರ ಅಭಿವೃದ್ಧಿ ಹೊಂದಬೇಕೆಂದರೆ ಬಿಜೆಪಿಗೆ ಕ್ಷೇತ್ರದ ಮತದಾರರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಚುನಾವಣೆಯ ಸಂದರ್ಭದಲ್ಲಿ ಅವಕಾಶ ವಂಚಿತರು ಮತ್ತೊಂದು ಪಕ್ಷದತ್ತ ಮುಖ ಮಾಡುವುದು ಸಹಜ, ಅದೇ ರೀತಿಯಲ್ಲಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವರು ಹೋಗಿದ್ದಾರೆ. ಅವರ ಬದಲಿಗೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ, ತುಮಕೂರು ನಗರ ಅಭ್ಯರ್ಥಿ ಜೋತಿಗಣೇಶ್, ಚುನಾವಣಾ ಉಸ್ತುವಾರಿ, ಎಂಎಲ್ಸಿ ಚಿದಾನಂದಗೌಡ, ಟಿ.ಎಸ್.ನಿರಂಜನ್, ಟಿ.ಆರ್.ಸದಾಶಿವಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!