ಗುಬ್ಬಿಯಲ್ಲಿ ಶ್ರೀನಿವಾಸ್ ಪರ ಜಮೀರ್ ರೋಡ್ ಶೋ

97

Get real time updates directly on you device, subscribe now.


ಗುಬ್ಬಿ: ಈ ಬಾರಿ ಕಾಂಗ್ರೆಸ್ ಸುಮಾರು 160 ಸೀಟು ಬರುವ ಮೂಲಕ ಕಾಂಗ್ರೆಸ್ ಪಕ್ಷ ಆಡಳಿತ ಮಾಡುತ್ತದೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ತಿಳಿಸಿದರು.
ಪಟ್ಟಣದ ಶ್ರೀಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಕುನ್ನಾಲ ಗ್ರಾಮದ ವರೆಗೂ ರೋಡ್ ಶೋ ಮಾಡಿ ಮಾತನಾಡಿ, ಇಬ್ರಾಹಿಂ ಜೋಕರ್ ಇದ್ದಂತೆ, ಭದ್ರಾವತಿಯ ಅವರ ಕ್ಷೇತ್ರದಲ್ಲಿ ಅವರು ಗೆಲ್ಲಲು ಸಾಧ್ಯವಾಗಿಲ್ಲ. ಅಂತಹದರಲ್ಲಿ ರಾಜ್ಯದಲ್ಲಿ ಎಷ್ಟು ಸೀಟು ಗೆಲ್ಲಿಸಲು ಸಾಧ್ಯ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಪಕ್ಷದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಈ ಚುನಾವಣೆಯಲ್ಲಿ ಅವರಿಗೆ ಜನ ಪಾಠ ಕಲಿಸುತ್ತಾರೆ. ಶೇ.40 ಪರ್ಸೆಂಟ್ ಸರಕಾರ ಎಂದು ದೇಶಕ್ಕೆ ಗೊತ್ತಿದೆ. ಹಾಗಾಗಿ ಇಲ್ಲಿನ ರಾಜಕಾರಣಿಗಳು ಮತ ಕೇಳಿದರೆ ಜನ ಮತ ಹಾಕುವುದಿಲ್ಲ ಎಂದು ತಿಳಿದು ಕೇಂದ್ರ ಮಂತ್ರಿಗಳು ಪ್ರಧಾನಮಂತ್ರಿ, ಗೃಹ ಮಂತ್ರಿ ಬಂದು ಪ್ರಚಾರ ಮಾಡುವ ಸ್ಥಿತಿಗೆ ತಲುಪಿದೆ ಎಂದರು.

ಗುಬ್ಬಿ ಕ್ಷೇತ್ರದಲ್ಲಿ ವಾಸಣ್ಣನಿಂದ ಜೆಡಿಎಸ್ ಹೊರತು ಜೆಡಿಎಸ್ ನಿಂದ ವಾಸಣ್ಣ ಅಲ್ಲ, ಈ ಬಾರಿ ಗೆಲ್ಲಿಸಿದರೆ ಖಂಡಿತವಾಗಿಯೂ ಸಚಿವ ಸ್ಥಾನಕ್ಕೆ ನಾನು ಅವರ ಪರವಾಗಿ ಹೋರಾಡುತ್ತೇನೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೋರಾಟವಿರುವುದು ಬಿಟ್ಟರೆ ಜೆಡಿಎಸ್ ಲೆಕ್ಕಕ್ಕಿಲ್ಲ. ಕಾಂಗ್ರೆಸ್ ಮಾಡಿರುವಂತಹ ಸಾಧನೆ ಬಹಳ ದೊಡ್ಡದು, ಸಿದ್ದರಾಮಯ್ಯ ಅವರ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ನೂರಾರು ಭಾಗ್ಯಗಳನ್ನು ನೀಡಿ ಅದನ್ನು ಜನರಿಗೆ ತಿಳಿಸಿ ನಾವು ಚುನಾವಣೆ ಎದುರಿಸುತ್ತೇವೆ. ಆದರೆ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದ್ದು ಕರ್ನಾಟಕದ ಚುನಾವಣೆಗೆ ಪ್ರಚಾರಕರನ್ನು ಮೋದಿ, ಅಮಿತ್ ಶಾ ಕರೆಸಿ ಪ್ರಚಾರ ಮಾಡಿಸುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಅವರ ಸಾಧನೆ ಶೂನ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕ ಲಿಂಗಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರೆಹಮಾತ್, ಪಟ್ಟಣ ಪಂಚಾಯಿತಿ ಸದಸ್ಯ ಮಹಮದ್ ಸಾಧಿಕ್, ಫಿರ್ದೋಸ್ ಅಲಿ, ಕೊಪ್ಪ ದೇವರಾಜು, ಸಿ.ಕೆ.ಗೌಡ, ಸೇರಿದಂತೆ ಈ ಭಾಗದ ಎಲ್ಲಾ ಮುಸ್ಲಿಂ ಮುಖಂಡರು, ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!