ಮಹಿಳೆ ಮೇಲೆ ಅತ್ಯಾಚಾರ ಆರೋಪಿ ಬಂಧನ

222

Get real time updates directly on you device, subscribe now.


ಕೊರಟಗೆರೆ: ಒಂಟಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಮಲ್ಲಿಕಾರ್ಜುನ (52) ಆತನನ್ನು ಕೊರಟಗೆರೆ ಸಿಪಿಐ ಸುರೇಶ್ ನೇತೃತ್ವದ ಪೊಲೀಸರ ತಂಡ ಭಾನುವಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಾವಳಿ ಗ್ರಾಮದ ಸಾವಿತ್ರಮ್ಮ (47) ಕೊಲೆಯಾದ ದುರ್ದೈವಿ ಮಹಿಳೆ. 3 ದಿನದ ಹಿಂದೆ ಸಾವಿತ್ರಮ್ಮ ರಾಗಿಹಿಟ್ಟು ಮಾಡಿಸಲೆಂದು ಚಿಕ್ಕಾವಳ್ಳಿ ಗ್ರಾಮದಿಂದ ತಿಮ್ಮನಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಹೋಗುವಾಗ ಈ ಕೃತ್ಯ ವೆಸಗಿದ್ದಾನೆ.

ಚಿಕ್ಕಾವಳ್ಳಿ ಗ್ರಾಮದ ಮಲ್ಲಿಕಾರ್ಜುನ ಆಕೆಯನ್ನು ಬಲವಂತವಾಗಿ ಅಡಿಕೆ ತೋಟಕ್ಕೆ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಆಕೆ ಊರಿನವರಿಗೆ ವಿಷಯ ತಿಳಿಸುವುದಾಗಿ ಹೇಳಿದ್ದಾರೆ. ಇದರಿಂದ ಕುಪಿತನಾದ ಮಲ್ಲಿಕಾರ್ಜುನ ಸಾವಿತ್ರಮ್ಮನ ಕುತ್ತಿಗೆಗೆ ದಾರ ಬಿಗಿದು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನುಅಲ್ಲೆ ಬಿಟ್ಟು ಮನೆಗೆ ತೆರಳಿದ್ದಾನೆ.

ಮಹಿಳೆಯ ಶವ ಕಂಡ ಸ್ಥಳೀಯರು ಕೊರಟಗೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿಪಿಐ ಸುರೇಶ್, ಪಿಎಸ್ಐ ಪ್ರದೀಪ್ಸಿಂಗ್ ಇದ್ದರು. ಕೊರಟಗೆರೆ ಪೊಲೀಸ್ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!