ವಿವಿಧ ಗ್ರಾಮಗಳಲ್ಲಿ ಶ್ರೀನಿವಾಸ್ ಪ್ರಚಾರ

101

Get real time updates directly on you device, subscribe now.


ಗುಬ್ಬಿ: ತಾಲೂಕಿನ ಅಮ್ಮನಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮ್ಮನಘಟ್ಟ, ಇಸ್ಲಾಂನಗರ, ಎನ್.ಮತ್ತಘಟ್ಟ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ ಪ್ರಚಾರ ಮಾಡಿ ಮತಯಾಚನೆ ಮಾಡಿದರು.
ಬಹುತೇಕ ಈ ಚುನಾವಣೆಯಲ್ಲಿ ನನಗೆ ಜಯ ಸಿಗಲಿದ್ದು, 5ರ ಅದೃಷ್ಟ ಒಲಿದಿದ್ದು ನನ್ನ ಕ್ರಮ ಸಂಖ್ಯೆ ಐದು, 5ನೇ ಬಾರಿ ವಿಧಾನಸಭೆ ಚುನಾವಣೆಗೆ ನಿಂತಿದ್ದೇನೆ. ಇದೇ ಐದರಿಂದ ಚುನಾವಣಾ ಕಣ ಬದಲಾವಣೆಯಾಗುತ್ತದೆ ಎಂದು ಹೇಳುವ ಮೂಲಕ ಅಚ್ಚರಿ ಹೇಳಿಕೆ ನೀಡಿದ್ದಾರೆ.

ತಾಲೂಕಿನ 27 ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ಇಂದಿಗೆ ಮುಗಿದಿದ್ದು ಹೋದ ಎಲ್ಲಾ ಭಾಗದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಈ ಬಾರಿ ಪಕ್ಷ ಬದಲಾವಣೆಯಾಗಿದ್ದು ಬಿಟ್ಟರೆ ಮತದಾರರು ನನ್ನ ಜೊತೆಯಲ್ಲಿಯೇ ಇದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಜಂಗೇಗೌಡ, ಸಿದ್ದಯ್ಯ, ಸಿದ್ದರಾಜು, ಮಹಾದೇವಯ್ಯ, ಕೃಷ್ಣಪ್ಪ,ಯೋಗೀಶ್, ಶಶಿ, ಕಾಂತರಾಜು, ನಟರಾಜು ಇನ್ನಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!