ಗೆದ್ದವರಿಂದ ಇತಿಹಾಸ ನಿರ್ಮಾಣ

276

Get real time updates directly on you device, subscribe now.


ಕುಣಿಗಲ್: ಶನಿವಾರ ನಡೆಯಲಿರುವ ಮತ ಎಣಿಕೆಯಲ್ಲಿ ತಾಲೂಕಿನ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗುವ ಜೊತೆ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ.

ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ.ರಂಗನಾಥ್ ಆಯ್ಕೆಯಾದಲ್ಲಿ ಸತತ ಎರಡನೆ ಬಾರಿಗೆ ಆಯ್ಕೆಯಾದ ಕೀರ್ತಿಗೆ ಒಳಗಾಗಿ ತಾಲ್ಲೂಕಿನ ರಾಜಕೀಯ ಇತಿಹಾಸದಲ್ಲಿ ಎರಡನೆ ಬಾರಿಗೆ ಆಯ್ಕೆಯಾದ ಹೊಸ ಇತಿಹಾಸ ಬರೆಯಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಡಾ.ರವಿ ಆಯ್ಕೆಯಾದಲ್ಲಿ ಶಾಸಕರ ಪುತ್ರ ಶಾಸಕನಾಗಿ ಆಯ್ಕೆಯಾದ ಇತಿಹಾಸ ಸೃಷ್ಟಿಸುವ ಜೊತೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದವರು ಶಾಸಕರಾಗಿ ಆಯ್ಕೆಯಾದ ಇತಿಹಾಸ ನಿರ್ಮಿಸಲಿದ್ದಾರೆ. ಅಲ್ಲದೆ ತಾಲೂಕಿನಲ್ಲಿ ವೈದ್ಯರಾಗಿ ಶಾಸಕರಾಗಿ ಆಯ್ಕೆಯಾದ ಎರಡನೆ ವ್ಯಕ್ತಿಯಾಗಿ ತಾಲೂಕು ಇತಿಹಾಸದಲ್ಲಿ ಹೆಸರು ಮಾಡಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಆಯ್ಕೆಯಾದಲ್ಲಿ ಸತತ ಮೂರು ಬಾರಿ ಸೋತು ನಾಲ್ಕನೇ ಬಾರಿಗೆ ಟಿಕೆಟ್ ಪಡೆದು ಗೆದ್ದ ಇತಿಹಾಸದ ಜೊತೆ ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷರೊಬ್ಬರು ಶಾಸಕರಾಗಿ ಆಯ್ಕೆಯಾದ ಹೊಸ ಇತಿಹಾಸ ಬರೆಯಲಿದ್ದಾರೆ. ಒಟ್ಟಿನಲ್ಲಿ ಮೂವರು ಅಭ್ಯರ್ಥಿ ಗಳ ಪೈಕಿ ಯಾರೆ ಆಯ್ಕೆಯಾದರೂ ತಾಲ್ಲೂಕಿನ ರಾಜಕಾರಣದ ಇತಿಹಾಸದಲ್ಲಿ ಹೊಸ ಇತಿಹಾಸ ಬರೆದಂತೆ ಆಗುತ್ತದೆ.

Get real time updates directly on you device, subscribe now.

Comments are closed.

error: Content is protected !!