ಮಕಾಡೆ ಮಲಗಿದ ಸಚಿವರು

179

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲೆ ತಿಪಟೂರು ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿಯಿಂದ ಗೆದ್ದು ಸಚಿವರಾಗಿದ್ದ ಬಿ.ಸಿ.ನಾಗೇಶ್ ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಮಂತ್ರಿಯಾಗಿದ್ದ ಜೆ.ಸಿ.ಮಾಧುಸ್ವಾಮಿ ಈ ಬಾರಿ ಚುನಾವಣೆಯಲ್ಲಿ ಮಕಾಡೆ ಮಲಗಿದ್ದಾರೆ. ಕ್ಷೇತ್ರದ ಜನರು ಇವರನ್ನು ತಿರಸ್ಕರಿಸುವ ಮೂಲ ಮನೆಗೆ ಕಳಿಸಿದ್ದಾರೆ.

ಇಬ್ಬರು ಸಚಿವರು ಒಂದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಕೂಡ ಕ್ಷೇತ್ರದ ಮತದಾರರು ಇವರನ್ನು ಗೆಲ್ಲಿಸುವ ಗೋಜಿಗೆ ಹೋಗಿಲ್ಲ.
ಮಧುಸ್ವಾಮಿ ಬಾಯಿ ಬಿಟ್ಟರೆ ಬೈಯ್ಯುತ್ತಾರೆ. ಅತಿರೇಖದ ವರ್ತನೆ ಮಾಡುವುದನ್ನು ಸಹಿಸದೆ ಸೋಲಿನ ಸುಳಿಗೆ ಸಿಲುಕಿಸಿದ್ದಾರೆ ಎನ್ನಲಾಗಿದೆ.
ಇನ್ನು ಬಿ.ಸಿ.ನಾಗೇಶ್ ಸರಳ ವ್ಯಕ್ತಿಯಾಗಿದ್ದರು ಇವರು ಕ್ಷೇತ್ರ ಮರೆತಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದರು, ಈ ಅಂಶವೂ ಅವರ ಸೋಲಿಗೆ ಕಾರಣವಾಗಿರಬಹುದು. ಒಟ್ಟಾರೆ ಸಚಿವರಿದ್ದರು ಸೋತು ಮನೆ ಸೇರಿವಂತಾಗಿದ್ದು ಮಾತ್ರ ವಿಪರ್ಯಾಸ.

Get real time updates directly on you device, subscribe now.

Comments are closed.

error: Content is protected !!