ದೇವೇಗೌಡರು ರಾಜ್ಯ, ರಾಷ್ಟ್ರದ ಆಸ್ತಿ: ಹರೀಶ್

79

Get real time updates directly on you device, subscribe now.


ಕುಣಿಗಲ್: ತಮ್ಮ ಇಳಿವಯಸ್ಸಿನಲ್ಲೂ ರಾಜ್ಯದ ನೆಲ, ಜಲ, ರೈತರು, ಬಡ ಜನತೆ ಪರ ಹೋರಾಟಕ್ಕೆ ತಮ್ಮನ್ನೆ ಮುಡುಪಾಗಿಸಿರುವ ಮಾಜಿ ಪ್ರಧಾನಿ ದೇವೇಗೌಡರು ಈ ರಾಜ್ಯ, ರಾಷ್ಟ್ರದ ಆಸ್ತಿ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಲ್.ಹರೀಶ್ ಹೇಳಿದರು.

ಗುರುವಾರ ಮಾಜಿಪ್ರಧಾನಿ ದೇವೇಗೌಡರ 91ನೇ ಹುಟ್ಟುಹಬ್ಬಾಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಜೆಡಿಎಸ್ ಕಾರ್ಯಕರ್ತರೊಂದಿಗೆ ಹಾಲು, ಬ್ರೆಡ್ ವಿತರಿಸಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಾದರೂ ಈ ನೆಲ, ಜಲ, ರೈತರು, ಬಡ ಜನತೆಯ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜ್ಯದ ಜಲದ ಸಮಸ್ಯೆ, ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಹಲವಾರು ರೈತರ ಸಮಸ್ಯೆ ಬಂದಾಗ ರಾಷ್ಟ್ರ ಮಟ್ಟದಲ್ಲಿ ಸಮರ್ಥವಾಗಿ ವಾದ ಮಂಡಿಸುವ ಶಕ್ತಿ ದೇವೇಗೌಡರಿಗೆ ಮಾತ್ರ, ಅವರ ಬುದ್ಧಿಮತ್ತೆಗೆ ರಾಷ್ಟ್ರದ ಪ್ರಧಾನಿಗಳೆ ಪ್ರಭಾವಿತರಾಗಿದ್ದಾರೆ. ತಮ್ಮ ಜೀವನದ ಉದ್ದಕ್ಕೂ ರಾಜ್ಯದ ಹಿತಚಿಂತನೆ ಬಯಸಿದ ದೇವೇಗೌಡರಿಗೆ ಭಗವಂತ ಮತ್ತಷ್ಟು ಆರೋಗ್ಯ, ಆಯುಷ್ಯ ಕರುಣಿಸಲಿ ಎಂದರು.

ಜೆಡಿಎಸ್ ಮುಖಂಡರಾದ ರಾಮೇಗೌಡ, ಮಂಜು, ಅರುಣ, ಮನೋಜ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!