ಬೇಲಿಗೆ ಇಟ್ಟಿದ್ದ ಬೆಂಕಿ ತಗುಲಿ ಟ್ರ್ಯಾಕ್ಟರ್ ಭಸ್ಮ

264

Get real time updates directly on you device, subscribe now.


ಹುಳಿಯಾರು: ಹೊಲದ ಬದುವಿನ ಬೇಲಿಗೆ ಇಟ್ಟಿದ್ದ ಬೆಂಕಿ ತಗುಲಿ ಟ್ರ್ಯಾಕ್ಟರ್ ಸುಟ್ಟು ಭಸ್ಮವಾದ ಘಟನೆ ಹುಳಿಯಾರು ಹೋಬಳಿಯ ಯಳನಾಡು ಪಂಚಾಯ್ತಿಯ ಮರಾಠಿ ಪಾಳ್ಯದಲ್ಲಿ ಶುಕ್ರವಾರ ಬೆಳಗ್ಗೆ ಜರುಗಿದೆ.

ಬೆಂಕಿಯ ಕೆನ್ನಾಲಿಗೆಗೆ ಭಸ್ಮಾವಾದ ಟ್ರ್ಯಾಕ್ಟರ್ ಯಳನಾಡು ಗ್ರಾಮದ ಮರಿಯಪ್ಪ ಅವರಿಗೆ ಸೇರಿದ್ದಾದೆ. ಇವರು ಮರಾಠಿ ಪಾಳ್ಯದ ತಮ್ಮ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ಹುಕ್ಕೆ ಹೊಡೆಯುತ್ತಿದ್ದರು. ಡೀಸೆಲ್ ಖಾಲಿಯಾದ ಪರಿಣಾಮ ಟ್ರ್ಯಾಕ್ಟರ್ ಹೊಲದಲ್ಲೇ ನಿಲ್ಲಿಸಿ ಡೀಸೆಲ್ ತರಲು ಹೊಸಹಳ್ಳಿ ಕೈಮರದ ಪೆಟ್ರೋಲ್ ಬಂಕ್ ಗೆ ಬಂದಿದ್ದಾರೆ.

ಅಷ್ಟರಲ್ಲಿ ಹೊಲದ ಬದುವಿನ ಬೇಲಿಗೆ ಇಟ್ಟಿದ್ದ ಬೆಂಕಿ ಟ್ರ್ಯಾಕ್ಟರ್ ಟೈರ್ ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಬಂಕ್ ನಿಂದ ಡೀಸೆಲ್ ತೆಗೆದುಕೊಂಡು ಹೋಗುವಷ್ಟರಲ್ಲಿ ಟ್ರ್ಯಾಕ್ಟರ್ ನ ಎರಡೂ ಟೈರ್, ಸ್ಟೇರಿಂಗ್, ಸೀಟು ಸುಟ್ಟು ಕರಕಲಾಗಿದೆ.

ಮರಿಯಪ್ಪ ಕೂಗಿಕೊಂಡಾಗ ಅಕ್ಕಪಕ್ಕದ ಜಮೀನಿನವರು ಓಡೋಡಿ ಬಂದು ಬಿಂದಿಗೆಯ ಮೂಲಕ ನೀರು ಹಾಕಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!