ಸಂಚಲನ ಮೂಡಿಸಿದ ವೀಡಿಯೋ

144

Get real time updates directly on you device, subscribe now.


ಕುಣಿಗಲ್: ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ವೀಡಿಯೋ ಒಂದು ಅರಣ್ಯ ಇಲಾಖಾಧಿಕಾರಿಗಳಿಗೆ ಕೆಲಕಾಲ ನಿದ್ದೆಗೆಡಿಸಿದಂತಾದ ಘಟನೆ ನಡೆದಿದೆ.

ಮಾವಿನ ತೋಟ ಒಂದರಲ್ಲಿ ಮಾವಿನ ಕಾಯಿ ಬಿಡಿಸುತ್ತಿರುವ ವೇಳೆ ಮಾವಿನ ತೋಟದಲ್ಲಿ ಸಿಂಹ ಕಾಣಿಸಿಕೊಂಡು ಕುಳಿತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕೆಲವರು ಇದು ಕುಣಿಗಲ್ ತಾಲೂಕಿನ ಗ್ರಾಮದಲ್ಲಿನ ಘಟನೆ ಎಂದು ಹಬ್ಬಿಸಿದರು. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶುಕ್ರವಾರ ಹರಿದಾಡಿದ ಪರಿಣಾಮ ಕೆಲಕಾಲ ಅರಣ್ಯ ಇಲಾಖಾಧಿಕಾರಿಗಳ ನಿದ್ದೆಗೆಡಿಸುವಂತಾಗಿತ್ತು. ನಂತರ ಇಲಾಖೆಯ ಹಿರಿಯ ಅಧಿಕಾರಿಗಳು ಸದರಿ ವೀಡಿಯೋ ಉತ್ತರ ಭಾರತದ ಗೀರ್ ಸಿಂಹಧಾಮದ್ದು ಎಂದು ಸ್ಪಷ್ಟಪಡಿಸಿದ್ದರಿಂದ ಸ್ಥಳೀಯ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.

Get real time updates directly on you device, subscribe now.

Comments are closed.

error: Content is protected !!