ಕೆಎನ್ಆರ್ ಗೆ ಸಚಿವ ಸ್ಥಾನ- ವಾಲ್ಮೀಕಿ ಸಮುದಾಯ ಸಂಭ್ರಮ

77

Get real time updates directly on you device, subscribe now.


ತುಮಕೂರು: ಸಹಕಾರಿ ಧುರೀಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅವರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು, ಕರ್ನಾಟಕ ವಾಲ್ಮೀಕಿ ಸೇನೆಯ ರಾಜ್ಯಾಧ್ಯಕ್ಷ ಕುಪ್ಪೂರು ಶ್ರೀಧರನಾಯಕ ಅವರ ನೇತೃತ್ವದಲ್ಲಿ ಟೌನ್ ಹಾಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು.

ಈ ವೇಳೆ ಮಾತನಾಡಿ, ನಮ್ಮ ನಾಯಕ ಕೆ.ಎನ್.ರಾಜಣ್ಣ ಅವರು ಬುದ್ದ, ಬಸವ, ಅಂಬೇಡ್ಕರ್ ಅವರ ಹೆಸರಿನ ಜೊತೆಗೆ, ಶ್ರೀವಾಲ್ಮೀಕಿ ಮಹರ್ಷಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ನಮಗೆ ಎಲ್ಲಿಲ್ಲದ ಸಂತೋಷ ಉಂಟು ಮಾಡಿದೆ. ಇಡೀ ದೇಶದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಏಕೈಕ ಶಾಸಕರು ನಮ್ಮ ಕೆ.ಎನ್.ರಾಜಣ್ಣ. ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರಕ್ಕೆ ಬಂದಂತಹ ಸಂದರ್ಭದಲ್ಲಿ ಈ ಬಾರಿ ಕೆ.ಎನ್.ರಾಜಣ್ಣ ಅವರನ್ನು ಗೆಲ್ಲಿಸಿ ಕಳುಹಿಸಿ, ನಾನು ಮಂತ್ರಿ ಮಾಡುತ್ತೇನೆ ಎಂಬ ಭರವಸೆ ನೀಡಿದ್ದರು.

ಕೊಟ್ಟ ಮಾತಿನಂತೆ ನಮ್ಮ ನಾಯಕರನ್ನು ಮಂತ್ರಿ ಮಾಡಿದ್ದಾರೆ. ಆ ಮೂಲಕ ವಾಲ್ಮೀಕಿ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ನೀಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲರಿಗೂ ವಾಲ್ಮೀಕಿ ಸಮುದಾಯ ಅಭಿನಂದನೆ ತಿಳಿಸುತ್ತದೆ. ಕೆ.ಎನ್.ರಾಜಣ್ಣ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆದು ವಾಲ್ಮೀಕಿ ಸಮುದಾಯಕ್ಕೆ ಕೀರ್ತಿ ತರಲೆಂಬುದು ನಮ್ಮಗಳ ಹಾರೈಕೆಯಾಗಿದೆ ಎಂದರು.
ಈ ವೇಳೆ ಕರ್ನಾಟಕ ವಾಲ್ಮೀಕಿ ಸೇನೆಯ ರಾಜ್ಯಾಧ್ಯಕ್ಷ ಕುಪ್ಪೂರು ಶ್ರೀಧರನಾಯಕ್, ಮಾರಣ್ಣ ಪಾಳ್ಳೇಗಾರ್, ಧನುಷ್ ಮದಕರಿ, ರಾಕೇಶ್, ಸೋಲಾರ್ ರಾಜಣ್ಣ, ಗೋಪಾಲ್, ಶಂಕರಪ್ಪ, ಹರೀಶ್ ದೇವಲಾಪುರ, ರಂಜನ್ ಕುಮಾರ್, ರಂಗನಾಥ್, ಬಂಡೆಕುಮಾರ್, ರಾಮಯ್ಯ, ಮರಳೂರು ನಾಗರಾಜು, ಇನ್ನಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!