ವೆಂಕಟೇಶ್ವರ ಬ್ರಹ್ಮ ರಥೋತ್ಸವ

119

Get real time updates directly on you device, subscribe now.


ತುಮಕೂರು: ನಗರದ ಎಪಿಎಂಸಿ ಯಾರ್ಡ್ ಬಳಿಯ ಮಹಾಲಕ್ಷ್ಮಿ ಬಡಾವಣೆಯ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ 19ನೇ ವರ್ಷದ ಜಾತ್ರಾ ಕಾರ್ಯಕ್ರಮ ಜೂ.1 ರಿಂದ 3 ರವರೆಗೆ ನಡೆಯಲಿದೆ ಎಂದು ಶ್ರೀನಿವಾಸ ಟ್ರಸ್ಟ್ ಅಧ್ಯಕ್ಷ ಡಿ.ಎಸ್.ಕುಮಾರ್ ತಿಳಿಸಿದ್ದಾರೆ.

ಮೇ.31 ರಂದು ಬೆಳಗ್ಗೆ 11-59 ರಿಂದ 12-53ರೊಗಳಗೆ ಅಭಿಜಿನ್ ಲಗ್ನದಲ್ಲಿ ಉಚಿತ ಸಾಮೂಹಿಕ ವಿವಾಹ ವೈಷ್ಣವರಿಗೆ ಉಪನಯನ ಏರ್ಪಡಿಸಲಾಗಿದೆ.

ಜೂ.1 ರಂದು ಬೆಳಿಗ್ಗೆ 11 ಕ್ಕೆ ವಿಶೇಷ ವಾಹನೋತ್ಸವ, ಸಂಜೆ 6 ಕ್ಕೆ ವಿಶೇಷ ಕಲ್ಯಾಣೋತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ , ಜೂ.2 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮರಥೋತ್ಸವ ಸಂಜೆ 6-30ಕ್ಕೆ ಹನುಮಂತೋತ್ಸವ , ಜೂ.3 ರಂದು ಬೆಳಿಗ್ಗೆ 11 ಕ್ಕೆ ಗರುಡೋತ್ಸವ, ಬೆಳಿಗ್ಗೆ 11-30ಕ್ಕೆ ಮಂಗಳದ್ರವ್ಯಾಭಿಷೇಕ , ಚಕ್ರಸ್ನಾನ, ಮುಂತಾದವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮೇ.31 ಹಾಗೂ ಜೂ.3 ರಂದು ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಇರುತ್ತದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತಮಂಡಲಿ ಮನವಿ ಮಾಡಿದೆ.

Get real time updates directly on you device, subscribe now.

Comments are closed.

error: Content is protected !!