ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ-ಬೈಕ್ ಗೆ ಬೆಂಕಿಗಾಹುತಿ

328

Get real time updates directly on you device, subscribe now.


ಕೊಡಿಗೇನಹಳ್ಳಿ: ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಒಂದು ಬೈಕ್ ಸುಟ್ಟು ಕರಕಲಾಗಿದ್ದು ಮತ್ತೊಂದು ಗುಂಪಿನ ವ್ಯಕ್ತಿಗೆ ಗಂಭೀರ ಗಾಯಗಳಾಗಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಕಡಗತ್ತೂರು ಗ್ರಾಮದಲ್ಲಿ ನಡೆದ ಘಷರ್ಣೆಯಲ್ಲಿ ಬೈಕ್ ಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೆಡಿಎಸ್ ಪಕ್ಷದ ಮುದ್ದಪ್ಪ ಮತ್ತು ಕಾಂಗ್ರೆಸ್ ಪಕ್ಷದ ಕೃಷ್ಣಪ್ಪ ಎಂಬುವರ ಮಧ್ಯೆ ನಡೆದ ಗಲಾಟೆ ಕೊನೆಗೆ ರಾಜಕೀಯ ತಿರುವು ಪಡೆದುಕೊಂಡಿದೆ. ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಮುದ್ದಪ್ಪ ಅವರಿಗೆ ಸೇರಿದ ಬೈಕ್ ಗೆ ಕೆಲವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರೆ, ಇದಕ್ಕೆ ಪ್ರತಿಕಾರವಾಗಿ ಕೃಷ್ಣಪ್ಪ ಮೇಲೆ ಹಲ್ಲೆ ನಡೆದಿದ್ದು, ತಲೆಗೆ ಪೆಟ್ಟು ಬಿದ್ದಿದೆ. ಸ್ಥಳಕ್ಕೆ ಬಂದಿದ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕಡಗತ್ತೂರು ಗ್ರಾಮದ ಕೆ.ಪಿ. ಕೃಷ್ಣಪ್ಪ ಎಂಬುವವರ ಮನೆಯ ಮುಂದೆ ದಾರಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಬೇಡ ಓಡಾಡಲು ಅಡ್ಡವಾಗುತ್ತದೆ ಎಂದು ಹೇಳಿದಾಗ ಅಶ್ವತ್ಥನಾರಾಯಣ ಹಾಗೂ ಮುದ್ದಣ್ಣ, ಇಬ್ಬರು ಸೇರಿ ಕೆ.ಪಿ.ಕೃಷ್ಣಪ್ಪನ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಇಬ್ಬರು ಸೇರಿ ದೊಣ್ಣೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿ ದೈಹಿಕವಾಗಿ ಹಲ್ಲೆ ಮಾಡಿದ್ದು ತಕ್ಷಣ ಕೊಡಿಗೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಠಾಣೆಗೆ ಬಂದ ದೂರು ನೀಡಿದ್ದೇನೆ ಎಂದು ಕೆ.ಪಿ.ಕೃಷ್ಣಪ್ಪ ದೂರನಲ್ಲಿ ಉಲ್ಲೇಖಿಸಿದ್ದಾರೆ.

ಕಡಗತ್ತೂರು ಗ್ರಾಮದಲ್ಲಿ ಅಶ್ವತ್ಥ ನಾರಾಯಣ್ ಎಂಬುವವರು ವೆಂಕಟಪ್ಪ ಹೋಟೆಲ್ ಹತ್ತಿರ ನನ್ನ ದ್ವಿಚಕ್ರ ವಾಹನ ನಿಲ್ಲಿಸಿ ಶನಿವಾರಂ ರೆಡ್ಡಿ ಬಳಿಮಾತನಾಡುತಿದ್ದಾಗ ಕೆ.ಪಿ.ಕೃಷ್ಣಪ್ಪ ಅವಾಚ್ಯ ಶಬ್ದಗಳಿಂದ ಬೈದು ದ್ವಿಚಕ್ರ ವಾಹನದ ಬೀಗವನ್ನು ಕಸಿದುಕೊಂಡು ಬಿಸಾಡಿದ್ದಾರೆ. ಈ ಬಗ್ಗೆ ವಿಚಾರಿಸುತ್ತಿದ್ದಾಗ ಮುದ್ದಪ್ಪ ಎಂಬುವವರು ಗಲಾಟೆ ಬಿಡಿಸುವ ಸಂದರ್ಭದಲ್ಲಿ ಗೋವರ್ಧನ ಎಂಬಾತನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಮತ್ತೊಂದು ಗುಂಪು ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!