ಅಪಘಾತದಲ್ಲಿ ಬೈಕ್ ಸವಾರ ಸಾವು

229

Get real time updates directly on you device, subscribe now.


ಕುಣಿಗಲ್: ಕಾರು ಬೈಕ್ ನಡುವೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ನಾಗೇಗೌಡನ ಪಾಳ್ಯದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತನನ್ನು ಚೊಟ್ಟನಹಳ್ಳಿಯ ಕಳಸಯ್ಯ(50) ಎಂದು ಗುರುತಿಸಲಾಗಿದ್ದು, ಈತ ನಾಗೇಗೌಡನ ಪಾಳ್ಯಬಳಿ ಸಂಬಂಧಿಯ ತಿಥಿ ಕಾರ್ಯ ಮುಗಿಸಿಕೊಂಡು ಹಿಂದಿರುಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಿವೈಡರ್ ಬಳಿ ತಿರುವು ಪಡೆಯುವಾಗ ವೇಗವಾಗಿ ಬಂದ ಕಾರು ನಡುವೆ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!