ಎಂಬಿಬಿಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣ: ಚೆನ್ನೈ ವಿದ್ಯಾರ್ಥಿ ಆತ್ಮಹತ್ಯೆ

477

Get real time updates directly on you device, subscribe now.


ಕುಣಿಗಲ್: ಎಂಬಿಬಿಎಸ್ ಎರಡನೇ ವರ್ಷದಲ್ಲಿ ಫೇಲ್ ಆಗಿದ್ದ ವಿದ್ಯಾರ್ಥಿ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಶವ ಪತ್ತೆಯಾಗಿದೆ. ಮೃತನನ್ನು ಚೆನ್ನೈನ ಅಶೋಕನಗರ ನಾಗತಮ್ಮನ್ ಕೋಯಿಲ್ ಸ್ಟ್ರೀಟ್ ನಿವಾಸಿ ಪ್ರವೀಣ್ ಕಾರ್ತೀಕ್ ಎಂದು ಗುರುತಿಸಲಾಗಿದೆ.

ಪ್ರವೀಣ್ ಕಾರ್ತೀಕ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ 4ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜೂನ್ 9ರಂದು ಟಿಕೆಟ್ ಬುಕ್ ಮಾಡಿ ಚೆನ್ನೈಗೆ ಮರಳಲು ಪೋಷಕರು ಮನವಿ ಮಾಡಿದ್ದರು. ಚೆನ್ನೈ ಬಸ್ ನಿಲ್ದಾಣದಲ್ಲಿ ಮಗನನ್ನು ಕರದುಕೊಂಡು ಬರಲು ಹೋದ ತಂದೆ ಚಂದ್ರಶೇಖರನ್ ಮಗ ಬರದಿರುವುದನ್ನು ಕಂಡು ಆತಂಕಕ್ಕೊಳಗಾಗಿದ್ದರು. ಅದೇ ಸಮಯದಲ್ಲಿ ತಾಯಿಯ ಮೊಬೈಲ್ಗೆ ‘ಮಿಸ್ ಯು ಮಮ್ಮಿ’ ಎನ್ನುವ ಸಂದೇಶ ಸಹ ಬಂದಿತ್ತು. ಆತಂಕಗೊಂಡ ಚಂದ್ರಶೇಖರನ್ ತುಮಕೂರು ಕಡೆ ಪ್ರಯಾಣ ಬೆಳೆಸಿದ್ದರು. ಮಾರ್ಕೋನಹಳ್ಳಿ ಜಲಾಶಯದ ಸಿಬ್ಬಂದಿಗೆ ಜಲಾಶಯದ ಬಳಿ ಬ್ಯಾಗ್, ಬೈಕ್, ಚಪ್ಪಲಿ ಮತ್ತು ಮೊಬೈಲ್ ದೊರೆತ್ತಿದ್ದು, ಚಂದ್ರಶೇಖರನ್ ಅವರನ್ನು ಸಂಪರ್ಕಿಸಿದ ಸಿಬ್ಬಂದಿ ಭಾನುವಾರ ಬೆಳಿಗ್ಗೆ ಶವ ತೇಲುತ್ತಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೋಷಕರು ಶವವನ್ನು ಗುರುತು ಹಿಡಿದಿದ್ದಾರೆ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!