ಲಾರಿ ಹರಿದು ಮಹಿಳೆ ಕಾಲು ಕಟ್

243

Get real time updates directly on you device, subscribe now.


ತಿಪಟೂರು: ನಗರದ ಸಾಯಿಬಾಬಾ ವೃತ್ತದ ರಸ್ತೆಯಲ್ಲಿ ಲಾರಿ ಚಕ್ರಕ್ಕೆ ಸಿಲುಕಿ ಚನ್ನರಾಯಪಟ್ಟಣ ತಾಲ್ಲೂಕು ಬಾಗೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದ ಸುಜಾತ (63) ಎಂಬುವವರ ಎರಡು ಕಾಲು ತುಂಡಾದ ಘಟನೆ ನಡೆದೆ.

ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಬೆಂಗಳೂರು ಕಡೆಯಿಂದ ಶಿವಮೊಗ್ಗ ಕಡೆ ಹರಿಯಾಣ ರಾಜ್ಯ ನೋಂದಣಿಯ ಲಾರಿ ಮಹಿಳೆಯ ಕಾಲಿನ ಮೇಲೆ ಸಂಚರಿಸಿ ಈ ಅವಘಡ ನಡೆಸಿದೆ.
ಸುಜಾತ ಅವರು ತಮ್ಮ ಪತಿಯ ಜೊತೆಗೆ ಟಿವಿಎಸ್ ವಾಹನದಲ್ಲಿ ರಸ್ತೆ ತಿರುವು ಪಡೆಯುತ್ತಿದ್ದಾಗ ಅಪಘಾತ ಸಂಭವಿಸಿ ಎರಡು ಕಾಲುಗಳು ತುಂಡಾಗಿದ್ದು, ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ದಾಖಲಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!