ಪ್ರೀತ್ಸೆ ಅಂತ ಪ್ರಾಣ ತಿಂದ- ಪ್ರೀತಿಸದಿದ್ದಕ್ಕೆ ಪ್ರಾಣ ತೆಗೆದ

ಅಪ್ರಾಪ್ತೆಯನ್ನು ಕೊಂದ ಪಾಗಲ್ ಪ್ರೇಮಿ

569

Get real time updates directly on you device, subscribe now.


ಶಿರಾ: ಪ್ರೀತ್ಸೆ ಪ್ರೀತ್ಸೆ ಅಂತ ಪ್ರಾಣ ತಿನ್ನುತ್ತಿದ್ದ, ಆದರೆ ಹುಡುಗಿ ಮಾತ್ರ ಪಾಗಲ್ ಪ್ರೇಮಿಯ ಪ್ರೀತಿಗೆ ಸೊಪ್ಪು ಹಾಕಿರಲಿಲ್ಲ, ಆದರೆ ಸೋಮವಾರ ಮತ್ತೆ ಹುಡುಗಿ ಹಿಂದೆ ಬಿದ್ದ ಹುಚ್ಚು ಪ್ರೇಮಿ ತನ್ನನ್ನು ಪ್ರೀತಿಸುವಂತೆ ಕೇಳಿದ್ದಾನೆ, ಆದರೆ ಹುಡುಗಿ ನಿರಾಕರಿಸಿದ್ದಾಳೆ, ಆದರೂ ಹುಡುಗ ಬಲವಂತವಾಗಿ ತಾಳಿ ಕಟ್ಟಲು ಮುಂದಾಗಿದ್ದಾನೆ, ಇದಕ್ಕೂ ವಿರೋಧಿಸಿದಾಗ ಹುಡುಗಿಯ ಪ್ರಾಣವನ್ನೇ ತೆಗೆದಿದ್ದಾನೆ ರಾಕ್ಷಸ.

ಇಂಥ ಘೋರ ದುರಂತ ನಡೆದಿರೋದು ಶಿರಾ ತಾಲ್ಲೂಕಿನ ದೊಡ್ಡಗೂಳ ಗ್ರಾಮದಲ್ಲಿ. ಪ್ರೀತಿಸುವಂತೆ ಬೇಡುತ್ತಿದ್ದ ಯುವಕ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆಯುವತಿಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ.
ಶಿರಾ ತಾಲ್ಲೂಕಿನ ದೊಡ್ಡಗುಳ ಸಮಿಪದ ರತ್ನಸಂದ್ರದ ಗೊಲ್ಲರಹಟ್ಟಿ ನಿವಾಸಿ ಕಾವ್ಯ ಎಂಬಾಕೆಯೆ ಕೊಲೆಯಾದ ದುರ್ದೈವಿ, ಕೊಲೆ ಮಾಡಿರುವ ಕಟುಕನ ಹೆಸರು ಈರಣ್ಣ.
ದೊಡ್ಡಗುಳ ಗ್ರಾಮದ ಯುವಕ ಈರಣ್ಣ ಗೊಲ್ಲರಹಟ್ಟಿಯ ಅಪ್ರಾಪ್ತ ಯುವತಿ ಕಾವ್ಯಳ ಹಿಂದೆ ಬಿದ್ದಿದ್ದ, ಪ್ರೀತಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದ, ಆದರೆ ಯುವತಿ ಆತನ ಪ್ರೀತಿಯನ್ನು ಒಪ್ಪಿರಲಿಲ್ಲ, ಸೋಮವಾರ ಯುವತಿ ಕಾಲೇಜಿಗೆ ಹೋಗುವ ಸಮಯದಲ್ಲಿ ಯುವತಿಯನ್ನು ಅಡ್ಡಗಟ್ಟಿ ತಾಳಿ ಕಟ್ಟಲು ಯತ್ನಿಸಿದ್ದಾನೆ, ಇದಕ್ಕೆ ಯುವತಿ ಒಪ್ಪದೆ ವಿರೋ‘ ವ್ಯಕ್ತಪಡಿಸಿದರಿಂದ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ. ಈ ಸಂಬಂ‘ ತಾಲ್ಲೂಕಿನ ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!