ನಗದು, ಚಿನ್ನ ಕಸಿದು ಪರಾರಿ

221

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಬಾಣಸಂದ್ರ ಕಳ್ಳನ ಗಿಡ ಪ್ರದೇಶದಲ್ಲಿನ ತೋಟದ ಮನಗೆ ನುಗ್ಗಿದ ಡಕಾಯಿತರ ತಂಡ ದಂಪತಿ ಮೇಲೆ ಹಲ್ಲೆ ನಡೆಸಿ ನಗದು ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ.

ತಾಲೂಕಿನ ಬಾಣಸಂದ್ರ ಗ್ರಾಮದ ಕೃಷ್ಣೇಗೌಡ ತಮ್ಮ ಪತ್ನಿ ಇಂದ್ರಮ್ಮ ಅವರೊಂದಿಗೆ ತೋಟದ ಮನೆಯಲ್ಲಿ ವಾಸವಿದ್ದರು, ಕಳೆದ ಗುರುವಾರ ರಾತ್ರಿ 9 ರ ವೇಳೆಯಲ್ಲಿ ಡಕಾಯಿತರ ತಂಡವೊಂದು ತೋಟದ ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ಕೃಷ್ಣೇಗೌಡರ ಮೇಲೆ ಹಲ್ಲೆ ನಡೆಸಿ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಪತ್ನಿ ಇಂದ್ರಮ್ಮ ಅವರ ಬಾಯಿಗೆ ಬಟ್ಟೆ ತುರುಕಿ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ ಮನೆಯಲ್ಲಿದ್ದ ನಗದನ್ನು ಕಸಿದು ಪರಾರಿಯಾಗಿದ್ದಾರೆ.

ದರೋಡೆಕೋರರ ಗುಂಪು ಹೊರ ನಡೆದ ಬಳಿಕ ಹರಸಾಹಸ ಪಟ್ಟು ಕೃಷ್ಣೇಗೌಡ ಹಗ್ಗ ಬಿಚ್ಚಿಕೊಂಡು ಸಂಬಂಧಿಕರಿಗೆ ಫೋನ್ ಮಾಡಿದ್ದಾರೆ. ತೋಟದ ಮನೆಗೆ ತೆರಳಿದ ಸಂಬಂಧಿಕರು ಹಲ್ಲೆಗೊಳಗಾಗಿದ್ದ ಕೃಷ್ಣೇಗೌಡ ದಂಪತಿಯನ್ನು ತುರುವೇಕೆರೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ ಪಿ ಮರಿಯಪ್ಪ, ಡಿವೈಎಸ್ಪಿ ಲಕ್ಷ್ಮೀಕಾಂತ್, ಸಿಪಿಐ ಗೋಪಾಲನಾಯ್ಕ, ಪಿಎಸ್ಐ ಚಿತ್ತರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ಥ ಕೃಷ್ಣೇಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ದಂಡಿನಶಿವರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!