ತೇರಿಗೆ ಬಾಳೆಹಣ್ಣು ಎಸೆಯುವ ಸ್ಪರ್ಧೆ

250

Get real time updates directly on you device, subscribe now.


ಚಿಕ್ಕನಾಯಕನಹಳ್ಳಿ: ದಿವ್ಯ ಜ್ಯೋತಿ ಹವ್ಯಾಸಿ ಕಲಾ ಸಂಘದಿಂದ ರಾಜ್ಯ ಮಟ್ಟದ ತೇರಿನ ಮಧ್ಯದ ಕಳಸಕ್ಕೆ 28ನೇ ವರ್ಷದ ಬಾಳೆಹಣ್ಣು ಎಸೆಯುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಪಟ್ಟಣದ ಪುರಸಭಾ ಕಾರ್ಯಾಲಯದ ಮುಂಭಾಗ ನಡೆದ ಸ್ಪರ್ಧೆಯಲ್ಲಿ 95 ಜನ ಭಾಗವಹಿಸಿದ್ದರು, ಪ್ರಥಮ ಬಹುಮಾನ ಬಸವರಾಜು ಕೊಡ್ಲಿ , ದ್ವೀತಿಯ ಬಹುಮಾನ ಶಶಿಕುಮಾರ್ ಜೋಗಿಹಳ್ಳಿ, ತೃತಿಯ ಬಹುಮಾನ ವೇಣುಗೋಪಾಲ್ ಕುಪ್ಪೂರು ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ ಮಂಜುಳ ಸಾವಶೆಟ್ಟಿಹಳ್ಳಿ ಪ್ರಥಮ ಬಹುಮಾನ ಪಡೆದುಕೊಂಡರು. ಈ ಸಂದರ್ಭದಲ್ಲಿ ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ ಅಧ್ಯಕ್ಷ ಸಿ.ಡಿ ಚಂದ್ರಶೇಖರ್, ನಾರಾಯಣ್, ಕಾಂಗ್ರೆಸ್ ಮುಖಂಡ ಜಗದೀಶ್, ಮುಜೀಬ್, ಶ್ರೀಧರ್, ಲೋಕೇಶ್ ಸೇರಿದಂತೆ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!