ಹೇಮಾವತಿ ನಾಲೆಗೆ ಬಿದ್ದು ಇಬ್ಬರು ಮಕ್ಕಳು ಸಾವು

251

Get real time updates directly on you device, subscribe now.


ಗುಬ್ಬಿ: ತಾಲೂಕಿನ ಇಸ್ಲಾಂಪುರ ಗ್ರಾಮದ ಬಳಿ ಹೇಮಾವತಿ ನಾಲೆಗೆ ಆಕಸ್ಮಿಕವಾಗಿ ಮೂರು ಮಕ್ಕಳು ಬಿದ್ದಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮೂವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ತುಮಕೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ,

ಮಹಮ್ಮದ್ ನಯೀಮ್ (7), ಮಿಸ್ಬಾಬಾನು(9) ಸಾವನ್ನಪ್ಪಿದ್ದು ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.

ಮಹ್ಮದ್ ಬಿಲಾಲ್ (10) ಪ್ರಾಣಾಪಾಯದಿಂದ ಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೊದಲಿಗೆ ಒಬ್ಬ ಹುಡುಗ ಮಾತ್ರ ಸಿಕ್ಕಿದ್ದು ಮಿಸ್ಬಾಬಾನು ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಳು, ನಂತರ ಅಗ್ನಿಶಾಮಕ ದಳದಿಂದ ಹುಡುಕಾಟ ನಡೆಸಿ ಹೇರೂರು ಬಳಿ ಶವ ದೊರೆತ್ತಿದೆ.
ಮೂವರು ಮಕ್ಕಳು ನಾಲೆಗೆ ಬಿದ್ದಿದ್ದಿನ್ನ ಗಮನಿಸಿದ ಯುವಕ ಆಕಾಶ್ ಕ್ಷತ್ರಿಯ ಕೂಡಲೇ ನಾಲಗೆ ಇಳಿದು ಮಹ್ಮದ್ ಬಿಲಾಲ್ನನ್ನು ರಕ್ಷಣೆ ಮಾಡಿದ್ದಾನೆ.

ಒಂದೇ ಮನೆಯ ಇಬ್ಬರು ಬಿದ್ದಿದ್ದು, ಅದರಲ್ಲಿ ಒಬ್ಬ ಬದುಕಿ ಇನ್ನೊಬ್ಬ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ, ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Get real time updates directly on you device, subscribe now.

Comments are closed.

error: Content is protected !!