ಪೊಲೀಸರಿಂದ ಯುವಕನ ರಕ್ಷಣೆ

9,236

Get real time updates directly on you device, subscribe now.


ಕುಣಿಗಲ್: ಕೌಟುಂಬಿಕ ಕಲಹಕ್ಕೆ ಬೇಸತ್ತು ಯುವಕ ಮನೆಯ ಕೊಠಡಿಯೊಳಗೆ ಹೋಗಿ ನೇಣಿಗೆ ಶರಣಾಗಲು ಯತ್ನಿಸಿದ್ದು, ಪೋಷಕರು 112ಗೆ ಕರೆ ಮಾಡಿದ್ದರ ಮೇರೆಗೆ ಪೊಲೀಸರ ಸಕಾಲಿಕ ಕ್ರಮದಿಂದಾಗಿ ಯುವಕನ ರಕ್ಷಣೆ ಮಾಡಿರುವ ಘಟನೆ ನಡೆದಿದೆ.

ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳೇದೇವಾಲಯ ಗ್ರಾಮದಲ್ಲಿನ 22 ವರ್ಷದ ಯುವಕ ಪ್ರಕಾಶ್ (ಹೆಸರು ಬದಲಿಸಿದೆ) ಮನೆಯಲ್ಲಿ ಮಂಗಳವಾರ ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ತಂದೆ, ತಾಯಿಯೊಂದಿಗೆ ಗಲಾಟೆ ಮಾಡಿಕೊಂಡು ಮನೆಯ ಕೋಣೆಯೊಳಗೆ ನುಗ್ಗಿ ಬಾಗಿಲು ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದ, ಆತಂಕಗೊಂಡ ಪೋಷಕರು ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ ಮೇರೆಗೆ 112ರ ವಾಹನ ಚಾಲಕ ಚಂದ್ರೇಗೌಡ, ಪೇದೆ ಮಲ್ಲೇಶ್ ಸಕಾಲಕ್ಕೆ ತೆರಳಿ, ಯುವಕನ ಮನ ಒಲಿಸಿ ಆತ್ಮಹತ್ಯೆ ಯತ್ನದಿಂದ ಪಾರು ಮಾಡಿದ್ದಾರೆ. ಒಂದು ವಾರದಲ್ಲಿ ಪೋಷಕರ ಮನವಿ ಮೇರೆಗೆ ಕುಣಿಗಲ್ ಪೊಲೀಸರು ಹಾಗೂ 112 ಸಿಬ್ಬಂದಿ ಈ ಘಟನೆ ಸೇರಿದಂತೆ ಇಬ್ಬರು ಯುವಕರನ್ನು ಸಕಾಲಕ್ಕೆ ತೆರಳಿ ಆತ್ಮಹತ್ಯೆ ಯತ್ನದಿಂದ ಪಾರು ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!