ವಿದ್ಯುತ್ ಸ್ಪರ್ಶ- 19 ಕುರಿ ಸಾವು

171

Get real time updates directly on you device, subscribe now.


ಪಾವಗಡ: ಕುರಿ ರೊಪ್ಪದ ಬಳಿಯಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಸ್ಪರ್ಶವಾಗಿ 19 ಕುರಿ ಸಾವನ್ನಪ್ಪಿರುವ ಘಟನೆ ಮಂಗಳವಾರ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಂಗಪುರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಶ್ರೀರಂಗಪುರ ಗ್ರಾಮದಲ್ಲಿ ಘಟನೆ ನಡೆದಿದ್ದು ಕುರಿಗಾಹಿ ಮಂಜುನಾಥ್ ಹಾಗೂ ಕುಟುಂಬ ತೀವ್ರಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಮಂಜುನಾಥ್ ಕುರಿ ಸಾಕಾಣಿಕೆಗಾಗಿ ತಮ್ಮ ಮನೆ ಬಳಿ ನಿರ್ಮಿಸಿರುವ ರೊಪ್ಪದ ಬಳಿಯೇ ಲೋಹದ ವಿದ್ಯುತ್ ಕಂಬವಿದ್ದು ಸೋಮವಾರ ರಾತ್ರಿ ಸುರಿದ ಮಳೆಗೆ ಗ್ರೌಂಡಿಂಗ್ ಸಂಭವಿಸಿ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆ ಕುರಿತು ತಿರುಮಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!