ವಿದ್ಯುತ್ ಶಾಕ್ ಗೆ ಮಹಿಳೆ ಬಲಿ

1,384

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ಹೋಬಳಿಯ ಜಿ.ಮಲ್ಲೇನಹಳ್ಳಿ ಗ್ರಾಮದ ರೈತ ಮಹಿಳೆ ಲೋಲಾಕ್ಷಮ್ಮ ಎಂಬುವರು ಆಕಸ್ಮಿಕ ವಿದ್ಯುತ್ ಅವಘಡಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಜಿ.ಮಲ್ಲೇನಹಳ್ಳಿ ಗ್ರಾಮದ ಲೋಲಾಕ್ಷಮ್ಮ ಎಂದಿನಂತೆ ಆಡು ಮೇಯಿಸಲು ಹೇಮಾವತಿ ನಾಲಾ ಪ್ರದೇಶಕ್ಕೆ ಹೋಗಿದ್ದಾರೆ.
ನಾಲಾ ಪ್ರದೇಶದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಸಂಜೆಯಾದರೂ ಲೋಲಾಕ್ಷಮ್ಮ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಸಂಬಂಧಿಕರು ಲೋಲಾಕ್ಷಮ್ಮ ಅವರ ಮೊಬೈಲಿಗೆ ಕರೆ ಮಾಡಿದ್ದಾರೆ. ಮೊಬೈಲ್ ಕರೆ ಸ್ವೀಕರಿಸಿದಿದ್ದಾಗ ಹುಡುಕಾಟ ನಡೆಸಿದ್ದಾರೆ, ಆ ವೇಳೆ ನಾಲೆ ಬಳಿ ವಿದ್ಯುತ್ ಅವಘಡಕ್ಕೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರಿಗೆ ಮೂವರು ಮಕ್ಕಳಿದ್ದಾರೆ.

ಈ ಕುರಿತು ಪಟ್ಟಣದ ಪೊಲೀಸರು ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!