ಚಿನ್ನಾಭರಣ, ನಗದು ಕಳ್ಳತನ

779

Get real time updates directly on you device, subscribe now.


ಕುಣಿಗಲ್: ಮನೆಯಲ್ಲಿ ಯಾರು ಇಲ್ಲದ ವೇಳೆ ಒಳನುಗ್ಗಿರುವ ಕಳ್ಳರು, ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ ನಗದು ದೋಚಿರುವ ಘಟನೆ ಹುಲಿಯೂರು ದುರ್ಗ ಪೊಲೀಸ್ ಠಾಣೆಯ ಬಂಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪದ್ಮಮ್ಮ ಎಂಬಾಕೆ ಒಬ್ಬರೆ ವಾಸವಿದ್ದು ಮನೆಮುಂದೆ ಬೀಗಹಾಕಿ, ಬೀಗದ ಕೈ ಕಿಟಕೆಬಳಿ ಇಟ್ಟು ಹೊಲದ ಬಳಿ ಹೋಗಿ ಸಂಜೆ ಬಂದು ಮನೆಯೊಳಗೆ ಬೀರುವಿನಲ್ಲಿದ್ದ ವಸ್ತು ಚೆಲ್ಲಾಪಿಲ್ಲಿಯಾಗಿದ್ದು ಬೀರುವಿನಲ್ಲಿದ್ದ 30ಗ್ರಾಂ ಮಾಂಗಲ್ಯ ಸರ, ಐದುಸಾವಿರ ನಗದು ಕಳುವಾಗಿದೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!