ಅಪಘಾತದಲ್ಲಿ ಯುವಕ ಸಾವು

2,315

Get real time updates directly on you device, subscribe now.


ಕುಣಿಗಲ್: ಬೈಕ್ ಅಪಘಾತದಲ್ಲಿ ಯುವಕನೊರ್ವ ಗಂಭೀರವಾಗಿ ಗಾಯಗೊಂಡು ಧಾರುಣವಾಗಿ ಮೃತಪಟ್ಟಿರುವ ಘಟನೆ ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಹಗ್ಗಡತಿಹಳ್ಳಿ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಮೃತ ಯುವಕನ್ನು ಅರ್ಪಿತ್ (26) ಎಂದು ಗುರುತಿಸಲಾಗಿದ್ದು, ಈತ ಮೊಬೈಲ್ ಟವರ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ, ಶುಕ್ರವಾರ ರಾತ್ರಿ ಮೊದೂರು ಸಮೀಪದಲ್ಲಿನ ಟವರ್ನಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸಿ ಬೈಕ್ನಲ್ಲಿ ಬರುವಾಗ ಹೆಗ್ಗಡತಿ ಹಳ್ಳಿಯ ತಿರುವಿನಲ್ಲಿ ಬೈಕ್ ಆಯತಪ್ಪಿ ರಸ್ತೆ ಬದಿಯ ಮೆಳೆಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯವಾಗಿ, ಮೆಳೆಯಲ್ಲೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ, ರಾತ್ರಿ ಈ ಮಾರ್ಗ ನಿರ್ಜನ ಪ್ರದೇಶವಾದ ಕಾರಣ ಯಾರ ಗಮನಕ್ಕೂ ಬಂದಿಲ್ಲ, ಶನಿವಾರ ಬೆಳಗ್ಗೆ ಈ ಮಾರ್ಗವಾಗಿ ಶಾಲೆಗೆ ಹೋಗುವ ಮಕ್ಕಳು ಗ್ರಾಮಸ್ಥರಿಗೆ ವಿಷಯ ತಿಳಿಸಿದ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ.

Get real time updates directly on you device, subscribe now.

Comments are closed.

error: Content is protected !!