ಲಾಡ್ಜ್ನಲ್ಲಿ ಮಹಿಳೆ ಕೊಲೆ

19,667

Get real time updates directly on you device, subscribe now.


ಕುಣಿಗಲ್: ಅಕ್ರಮ ಸಂಬಂಧ ಹೊಂದಿದ್ದ ಪ್ರೇಮಿಗಳ ನಡುವಿನ ವೈಮನಸ್ಯಕ್ಕೆ ವಿವಾಹಿತ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಟ್ಟಣದ ಖಾಸಗಿ ಲಾಡ್ಜ್ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಮೃತಳನ್ನು ಬೆಂಗಳೂರು ಸಮೀಪದ ತಾವರೆಕರೆ ಸಮೀಪದ ಮಾದಾಪುರ ಗ್ರಾಮದ ಲಕ್ಷ್ಮಮ್ಮ (28) ಎಂದು ಗುರುತಿಸಲಾಗಿದೆ, ಈಕೆ ವಿವಾಹವಾಗಿದ್ದು, ತಾವರೆಕೆರೆ ಸಮೀಪದಲ್ಲಿದ್ದ ಖಾಸಗಿ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಾವಣಗೆರೆ ಮೂಲದ ಮಂಜುನಾಥ ಎಂಬುವನೊಂದಿಗೆ ಸಲುಗೆ ಬೆಳಿಸಿಕೊಂಡು ಸಲುಗೆ ಪ್ರೇಮಕ್ಕೆ ತಿಗುತ್ತಿದ್ದು, ಶುಕ್ರವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿ ಪಟ್ಟಣದ ದಿವ್ಯಲಾಡ್ಜ್ನಲ್ಲಿ ಕೊಠಡಿ ಬಾಡಿಗೆ ಪಡೆದಿದ್ದರು, ಬೆಳಗಿನ ಜಾವ ಲಾಡ್ಜ್ ಕೊಠಡಿಯಲ್ಲಿ ಲಕ್ಷ್ಮಮ್ಮನನ್ನು ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ಮೃತದೇಹ ನೋಡಿ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.

ಕೊಠಡಿ ಪಡೆಯುವಾಗ ನೀಡಿದ್ದ ವಿಳಾಸದ ದಾಖಲೆ ಆಧಾರದ ಮೇಲೆ ಆರೋಪಿ ಮಂಜುನಾಥ್ನನ್ನು ವಶಕ್ಕೆ ಪಡೆದ ಕುಣಿಗಲ್ ಸಿಪಿಐ ನವೀನ್ಗೌಡ ಮತ್ತು ಸಿಬ್ಬಂದಿ, ಡಿವೈಎಸ್ಪಿ ಲಕ್ಷ್ಮೀಕಾಂತ ನೇತೃತ್ವದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಜಗಳ ನಡೆದು, ಜಗಳ ವಿಕೋಪಕ್ಕೆ ತಿರುಗಿರುವುದು ಕೊಲೆಗೆ ಕಾರಣ ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!