ಮದ್ಯಪ್ರಿಯ ನೇಣಿಗೆ ಶರಣು!

226

Get real time updates directly on you device, subscribe now.


ತುರುವೇಕೆರೆ: ಪಟ್ಟಣದ ದೇವೇಗೌಡ ಬಡಾವಣೆ ನಿವಾಸಿ ಶಿವಕುಮಾರ್ ಕುಡಿತದ ಅಮಲಿನಲ್ಲಿ ನೇಣಿಗೆ ಶರಣಾಗಿದ್ದಾನೆ.

ಪಟ್ಟಣದ ದೇವೇಗೌಡ ಬಡಾವಣೆ ನಿವಾಸಿ ರಾಮಶೆಟ್ಟಿ ಪುತ್ರ ಶಿವಕುಮಾರ್ (33) ಎಂದು ಗುರುತಿಸಲಾಗಿದೆ. ಪೈಂಟರ್ ವೃತ್ತಿ ಮಾಡುತ್ತಿದ್ದ ಶಿವಕುಮಾರ್ ಮದ್ಯಸೇವನೆ ಚಟಕ್ಕೆ ಬಿದ್ದಿದ್ದರು. ಮದ್ಯಸೇವನೆ ಬಿಡುವಂತೆ ತಂದೆ-ತಾಯಿ ಹಾಗೂ ಪತ್ನಿ ಅನೇಕ ಬಾರಿ ಬುದ್ದಿವಾದ ಹೇಳಿದ್ದರು. ಆದರೆ, ಏನು ಪ್ರಯೋಜನವಾಗಿರಲಿಲ್ಲ, ಶಿವಕುಮಾರ್ ಮದ್ಯ ಸೇವಿಸುವುದು ಮುಂದುವರೆದಿತ್ತು. ಮನೆಯಲ್ಲಿ ಪತ್ನಿ, ಮಕ್ಕಳು ಯಾರೂ ಇಲ್ಲದಾಗ ಶಿವಕುಮಾರ್ ಮದ್ಯದ ಅಮಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪತ್ನಿ ಪವಿತ್ರಾ ಈ ಸಂಬಂಧ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!