ಚಿಕ್ಕನಾಯಕನಹಳ್ಳಿ: ಪಟ್ಟಣದ ಕೆಎಂಹೆಚ್ ಪಿಎಸ್ ಶಾಲೆ ಮುಂಭಾಗ ಲಾರಿಯೊಂದು ಮಹಿಳೆಯ ಕಾಲಿನ ಮೇಲೆ ಹರಿದು ಪರಿಣಾಮ ತೀವ್ರ ರಕ್ತಸ್ರಾವಗೊಂಡ ಮಹಿಳೆಯನ್ನು ತುಮಕೂರು ಆಸ್ಪತ್ರೆಗೆ ವರ್ಗಾಯಿಸಲಾಗಿದೆ .
ಕೊಡಲಾಗರ ಗ್ರಾಮದ ಮಹಿಳೆ ಗೌರಮ್ಮ (64) ಸೋಮವಾರ ಸಂತೆಗೆ ಎಂದು ಪಟ್ಟಣಕ್ಕೆ ಬಂದಿದ್ದು ಮನೆಗೆ ಅಗತ್ಯ ವಸ್ತುಗಳನ್ನು ಖರೀದಿಸಿ ಊರಿಗೆ ಹಿಂತಿರುವಾಗ ರಸ್ತೆ ದಾಟುವ ಸಂದರ್ಭದಲ್ಲಿ ಆರ್ ಎಂಸಿ ಲಾರಿ ಮಹಿಳೆಗೆ ಡಿಕ್ಕಿ ಹೊಡೆದು ಮಹಿಳೆಯ ಕಾಲಿನ ಮೇಲೆ ಹರಿದಿದೆ, ಪರಿಣಾಮ ಗಾಯಗೊಂಡು ಮಹಿಳೆ ರಸ್ತೆಯಲ್ಲೇ ನರಳಾಡುವಂತಾಯಿತು, ಅರ್ಧ ಗಂಟೆ ನರಳಾಡುತ್ತಿದ್ದರೂ ಆ್ಯಂಬುಲೆನ್ಸ್ ಬಾರದ ಕಾರಣ ಆಟೋದಲ್ಲೇ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಆಸ್ಪತ್ರೆಗೆ ಸಕಳುಹಿಸಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Comments are closed.